ನೀ ಭಾವಿ ಭುವಿ ಬಾಯಿ ಒಡಲು ತುಂಬಿದೆ ತಾಯಿ,
ಬಾಯಾರಿಸಿದವರ ; ದಾಹ ತಣಿಸುವೆ ತಾಯಿ.
ನಿನ್ನಲ್ಲಿದೆ ನೀರು,ನನ್ನಲ್ಲಿದೆ ಕೊಡವು.ಆತನಲ್ಲಿದೆ ಹಗ್ಗ ಕುಣಿಕೆ, ಗಡಗಡೆಯು,
ದಣಿದ ಬಾಯಿಗೆ ಬೇಕು,ಕುಡಿಯಲು ನೀರು.ಕೊಡುವಾತನನ ಕೇಳು,
ನೀರು ಸೆಳೆಯಲು ಬೇಕು, ಹಗ್ಗ ಚಕ್ರಕೆ ಹಾಕು;
ಕೊಡದ ಕಂಠಕೆ ಕುಣಿಕೆ, ಹಾಕಿ ಹಗ್ಗವ ಬಿಡಲು;
ಕೊಡವ ತುಂಬಲು;ಜಗ್ಗಲು,ಸಾಧನವು ಗಡಗಡೆಯು;
ಸೇದಿ ಕುಡಿಯಲು ನೀರು,ದಾಹ ಬಿಡುಗಡೆಯು.
ನೀರು ತುಂಬಿಸೋ ಕಾಯ, ಸರಸರೆಯ ಗಡಗಡೆಗೆ; ಕಾಲರಾಯನ ಮಹಿಮೆ; ಮೂಲೆ ಸೇರಿದೆ ಕಡಿಗೆ.
ಗಂಟಿರೋತನಕ ತಿರುಪತಿ ಬಾ ನಮ್ಮಪ್ಪ; ಗಂಟು ತೀರಿದ ಮ್ಯಾಕೆ ನಡೀ ನೀ ತಿರಕಪ್ಪ.
No comments:
Post a Comment