Sunday 2 January 2011

ದಣಿದ ದೇಹಕೆ ಬೇಕು ಚೈತನ್ನ್ಯ ತುಂಬು.

ಯಾರು ಮಾಡದ ಎಲ್ಲರ ಕೆಲಸ ಆಗದೆ ಎಡವಟ್ಟಾಗುವದು.
ಆಗದ ಕೆಲಸ ಮಾಡಲು ಹೋಗಿ, ಎಲ್ಲಾ  ಹಳ್ಳಾ ಹಿಡಿಸುವದು.
ಸಂಸಾರ ಸಾಗರದೀ ಬಾಳ ಪಯಣ,ಚಲಿಸುತ ಹಾರುತ ಈಜುವದು.
ದಣಿದ ದೇಹಕೆ ಬೇಕು ಚೈತನ್ನ್ಯ ತುಂಬು.
ಬದುಕಿಗೂಟವು ಬೇಕು,ಊಟಕ್ಕೆ ಬದುಕಲ್ಲ.
ತಲೆಯ ತುಂಬ ತುಂಬಿಹುದು ನೆನಪುಗಳ ಕಥೆಯು.
ಹಣೆ ಹುಬ್ಬು ಹಿಡಿದಿಹುದು ನೋಡುತಿದೆ ಕಣ್ಣು.
ಕರುಣಾಳು ಬಾ ಬೆಳಕೇ ಮುಸುಕಿದೆ ಮಬ್ಬು.
ಅಧರಗಳು,ಹೊಮ್ಮುತಿವೆ ಮನದಾಳ ಹಾಡು,
ಹಾಡು ಹರುಷವ ಹಂಚು ಕಥೆ ಬಾಳ ಬೆಳಕು.
ಭಾವನೆಯ ಭಾವಗಳ ಭಾವುಕತೆಯ ತುಂಬಿ,
ಕೇಳುಗರ ಕಣ್ಮಣಿಯ ಧಾರೆ ತುಂಬಿ.
ನಾನು ನಾನೆಂಬ ಜಡ ಜೀವವು,
ಮಣ್ಣಿಂದ ಹುಟ್ಟಿಹುದು ಮಣ್ಣಾಗಿ ಹೋಗುವುದು.
ಇದು ವಾಸ್ತವ ,ಬಾಳ ಬದುಕಲು ಬಹುದು
ಸಾಧನೆಯ ಸಾಧ್ಯತೆಯು,ಹರೆ ಇರುವ ತನಕ,
ಏರುವದು ಸಹಜ, ನಿಲ್ಲುವದಸಾಧ್ಯ ಕೊನೆತನಕ;
ಗಟ್ಟಿರುತನಕ ದೇಹಕೆ ಕೈಕಾಲು ಎರಡು,
ಬೇಡುವದು ಟೊಂಕ ಊರಲು ಕೋಲು.
ಊರೆಲ್ಲ ನೆಂಟರು ಹೊತ್ತಿಗಾಗರು ಇರರು.
ಹೊಗಳುವರೆಲ್ಲ ಮಿತ್ರರು ಅಲ್ಲ.ತೆಗಳುವರೆಲ್ಲ ಶತ್ರುಗಳಲ್ಲ.
ಕೊಳಚಇಂದ ಎತ್ತುವರು ನಿನ್ನಲ್ಲಿರುವತನಕ.
ಕೊಳಚಿಯಲಿದ್ದು ಹಾರಾಡಲು ಸಲ್ಲ. ಬೀಳಲೇ ಬೇಕು ಏಳುತನಕ 
ಈ ಬಾಳ ಬದುಕು ಈ ಪರಿ ದಾಟುವ ತನಕ;
ಅವಿರತ ಪ್ರಯತ್ನ ಸಾಧ್ಯ ಸಹಜ.
 

No comments:

Post a Comment