Thursday 13 January 2011

ಅಂಕದ ಪರದೆ ಜಾರುವ ಮೊದಲೇ

ಅಂದಿನ ನಾಟಕ ಗಮ್ಮತ್ತೇನು ಹೇಳಲೇನು ಒಂದೇ ಎರಡೇ,
ನಾಟಕ ಸಾರಲು ಎತ್ತಿನ ಬಂಡಿ,ಚಿತ್ತಾರದ ಗಾಡಿ,
ತುತ್ತೂರಿ ಡ್ರಮ್ಮಿನ ಕೂಗೇನು, ಜೋಕರಣ ಲಾವಣಿ ಹಾಡೇನು,
ಹಂಚುವ ಹ್ಯಾಂಡಬಿಲ್ ಮೊಜೇನು.
ಬಡಜೋಕರನ ಕನ್ನಡ ಪ್ರೇಮ ಅಂದ;ಕನ್ನಡಕೊಬ್ಬ ಕೈಲಾಸಂ.
ಹಾದುವೆಯಾ ಕೈಲಾಸಂ ನಾ ಮಿಮಿಕ್ರಿಯೋ;
ಅದಕ್ಕೇನೋ ರಾಜಾ ಮತ್ತೆ ಮತ್ತೆ ಹಾಡ್ತೆನಿ ಕೇಳ್ರೋ,
ಕಲೆಕ್ಷನ್ ಘನಾಗಿ ಮಾಡ್ಸಿ,ಕಂಪನಿ ಬದುಕಿಸ್ರೋ,
ಎಂಥಾ ಮಾತು ಡೈಲಾಗೋ ಮತ್ತೆ ಮತ್ತೇ ಹೇಳ್ತೆನ್ರೋ.
ದುಡ್ಡು ಕೊಟ್ಟು ನೋಡ್ರಿ ಮತ್ತೆ ಮತ್ತೆ ಬರಲಾರ್ದೋ,
ಚಪ್ರ ಖರ್ಚು ಹೊಂಡಸ್ದಿದ್ರೆ ಮತ್ತೆಂದೂ ಕಾಣಲಾರ್ದೋ,
ಬೋ ಪಸಂದಾ ಆತು ಸಾಬ್ರೆ ಮಾಲಕ ನೆಲಾ ಸಸ್ತಾ ಕೊಟ್ರೆ,
ಕಾಸು ಕೊಟ್ಟೇ ಪಸಂದಾಗಿ ಚಾಪೆ ಹಾಸಿ ನೋಡ್ತೇವೆ.
ನಾಟಕಾ ಚೆನ್ನಾಗಿರದಿದ್ರೆ; ನಿನ್ನೊಂದಕೈ ನೋಡ್ಕೊಂತೇವೆ.
ಆತ್ಬುದ್ಧಿ ನಾನೇ ಯಜಮಾನ್ ಚೆನ್ನಿಲ್ಲಾಂದ್ರೆ ಕಾಸು ವಾಪಸ್ಸ್,
ಸವಕಲ್ ನಾಣ್ಯ ಕೊಡಬೇಡಿ, ನಾಟಕ ನೋಡಲು ಮರಿಬೇಡಿ,
ಕೊರಿಚುಟ್ಟ ಸೇದಿ ತೊಟ್ಟಿಲ್ಹಾಕೀ,ಬೋ ವೈನಾಗೀ,
ಲೇ ಕುಡ್ಕಾ ಕುಡದ್ ಗಿಡದ್ ಬಂದೀ, ಪೋಲೀಸಪ್ಪಗ ಸಿಕ್ಕೀ,
ಅಂದ್ರ ಲಾಕಪ್ ನ್ಯಾಗ ಬಂದೀ.  
ನಾಟಕ ಕಂಪನಿ ನಾಟಕಕಾರರು ಕೈಲಾಸಂ ನಾ ಸೇರಿದರು,
ಅಂಕದ ಪರದೆ ಜಾರುವ ಮೊದಲೇ
ನಾಟಕ ವೇ ಕಥೆ ಮುಗಿದಿಹುದು.

No comments:

Post a Comment