Friday 14 January 2011

ಪಂಚಕಚೇರಿಗೆ ಸಾಗಿದರು.

ಎಂಟುಮಾರು  ಧೋತ್ರ ಉಟ್ಟು,
ಎರಡು ಕಚ್ಚಿ ಹಾಕಿ ಕೊಂಡು;
ಮಕ್ಮಲ್  ಇಜಾರ ತೊಟ್ಟುಕೊಂಡು.
ಭರ್ಜರಿ ಸೆಲ್ಲೇ ಹೊತ್ಕೊಂಡು;
ಹಣೆ ಹುಬ್ಬ ತೀಡಿಕೊಂಡು,
ಅಂಜನೇಯ ನ ತಿಲಕ ಹಚ್ಚಿ,
ಜುಟ್ಟಕ್ಕೊಂದು ಮಲ್ಲಿಗೆ ಹೂವ ಚುಚ್ಚಿ
ಬಾಯೀ ತುಂಬಾ ಕವಳ ಇಟ್ಟಕೊಂಡು
ಹುರಿ ಹುರಿ ಮೀಸೆ ತಿರುವಿ,
ನೀಟಾಗಿ ಕೂತುಕೊಂಡು;
ಬಂದ ಜನಕೆ ಸಂತಸ ಕೈಮುಗಿದು
ದೇಶಾವರಿ ನಗೆಯಾ ಬೀರೀ,
ಮನೆಯಲಿ ಬೈಠಕ ಹೂಡಿದರು.
ಜರ್ದಾರಿ ರುಮಾಲ ಹಾಕಿ ಕೊಂಡು
ನಡೀರಿ ಹೋಗೋಣ ಎನ್ನುತ್ತಾ,
ಕೈಯಾಗ ದಂಡಾ ಹಿಡಕೊಂಡು,
ಗುರಿಕಾರ ಎಕ್ಕಡ ಮೆಟ್ಟಿ ಕೊಂಡು,
ಪಂಚಕಚೇರಿಗೆ ಸಾಗಿದರು.

No comments:

Post a Comment