Saturday 15 January 2011

ಕೃಷ್ಣೆ ಗಂಗಾ ಸಿಂಧು ಯಮುನೆ ಬ್ರಹ್ಮಪುತ್ರ;
ಹಿಮಗಿರಿಯ ಸುಖ ನಿನಗೇ ಸಂಹ್ಯಾದ್ರಿ ಭದ್ರೆ,
ಸಪ್ತಪುರ ಗಿರಿನಾರ ಹರಿಹರನ ಮುದ್ರೆ;
ಕಾವೇರಿ ಗೋದೆಯರು ಜಲ ತುಂಗಾಭದ್ರೆ,
ಜಮದಗ್ನಿ ರೇಣುಕೆಯ ಸ್ನೇಹಿ ಮಲಪ್ರಭೆ,
ಶೂರ್ಪನಿಯ ಪಾವನೆ ಮಾಡೀ ಪಂಢರೀ ಕಾಳಿ;
ಧರ್ಮಾ ವರದೆಯರೆಲ್ಲ ಹರಿಸುವರಿಲ್ಲಿ,
ಪರಿಸರವ ಕಾಯುವರು ಹರುಶ ಹಸಿರಲ್ಲಿ.
ಹಿಮಗಿರಿಜ ಶಂಕರನು ವಾಸಿಸಿದ ಕಾಶಿ,
ಮಥುರೆಯಲಿ ಪುಟ್ಟಿದ ದ್ವಾರಕೀಶ,
ಶರಯು ತೀರದಿ ಮೆರೆದ ಶ್ರೀ ರಾಮಚಂದ್ರ,
ಮುಗಿಸಿ ರಾಮಾಯಣವ ಗತಿಸಿ ಮಹಾಭಾರತವ;
ಲೀನವಾದನು ಅಲ್ಲಿ ಪುರಿ ಜಗನ್ನಾಥ;  
ದೇವ ದಾನವಗೆ ಜನ್ಮ ಕೊಟ್ಟಳಾ ಮಾತೆ;
ಕಥೆ ಸತ್ಯವೋ ಮಿಥ್ಯವೋ ಬಲ್ಲವ ಏಕನಾಥ,
ಕಲಿಕಾಲವಿದು ದೇವದಾನವರ ಕ್ಯಾತೆ,
ಸೂರ್ಯ ಚಂದ್ರ ಗೆ ಗ್ರಹಣ ಹಿಡಿವ ರಾಹು ಕೇತು;
ಬಿಡಿಸು ಅವರ ಈ ದುಷ್ಟ ಹೇತು,
ಬೇವು ಬೆಲ್ಲವ ತಿಂದು ನೆನಸು ಚಂದ್ರಾಮ.
ಎಳ್ಳು ಬೆಲ್ಲವ ತಿಂದು ಹರಿಸು ಭಾಸ್ಕರನ.
  
   

No comments:

Post a Comment