Tuesday 22 May 2012

ಸ್ವಾತಂತ್ರ್ಯ-ಪೂರ್ವ ದಲ್ಲಿ ನಾವು ಚಳುವಳಿ ಮಾಡುವವರೇ!!!

ಸ್ವಾತಂತ್ರ್ಯ-ಪೂರ್ವ ದಲ್ಲಿ ಮಕ್ಕಳು ಮತ್ತು ಮಹಿಳೆಯರ ಪಾತ್ರ:
ಚಳವಳಿ-ಕಾರರಿಗೆ ಊಟ ಬಟ್ಟೆ ವಸತಿ ಸೌಕರ್ಯ ಮಾಡಿದರು.
ಇವರಲ್ಲದೇ ಸ್ವಾತಂತ್ರ ಹೋರಾಟ ಗಾರರು, ಊರೂರು ಹೋಗುವ
ವ್ಯಾಪಾರಸ್ಥರು,ಬಳೇಕಾರರು,ಓಲೆಕಾರರು, ಲಾವಣಿ-ಕಾರರು,
ದುರುಗಮುರುಗರು, ಕಿರ್ತನಕಾರರು ಇತ್ಯಾದಿಗರು ಪ್ರಮುಖರು.
ಶಾಲೆ ಮಕ್ಕಳು ಮಹಿಳೆಯರು ಮುದುಕರು ಪ್ರಭಾತಫೇರಿ ಹಮ್ಮಿದರು.
ಚರ್ಚೆ ಲಾವಣಿ ಗೀ ಗೀ ಪದಗಳು ಮುಖ್ಯವಾಗಿದ್ದವು ಕೆಲವು ಗಳ ಚುಟುಕು ಇಲ್ಲಿದೆ.

1)ಲಾವಣಿ ಯಲ್ಲಿ ಸಂಘಟಕರು (ಪರಿಚಯ ಮಾಡಿಸುವದು):
ಕಸ್ತೂರ-ಬಾಯಿ ಯವರೇ; ಕಮಲಾ ದೇವಿಯವರೇ;
ವಿಮಲಾ-ಬಾಯಿ ಇವರ್ಯಾರೇ ;ನಾವು ಚಳುವಳಿ ಮಾಡುವವರೇ
2)ಬಾವುಟದ ಗಾಥಾ:
ಶಾಂತಿ ಪತಾಕಾ ಗಾಂಧೀ ಪತಾಕಾ;ಅಶೋಕ ಜವಾಹೀರಲಾಲ
ತ್ಯಾಗಮೂರ್ತಿ ಶ್ರೀಮುಖಾ ಸರದಾರ ವಲ್ಲಭ-ಭಾಯಿ-ರಾ
ದೇಶ ಕೀರ್ತಿ ಉಳಿಸಿರಾ.     

3)ಪ್ರಭಾತಫೆರಿಯಲ್ಲಿ ಬಾವುಟ (ಝಂಡಾ) ಗರ್ಜನೆ:  
ವಿಜಯಾವಿಶ್ವತಿ ರಂಗಾ ಪ್ಯಾರಾ ಝಂಡಾ ಉಂಚಾ ರಹೇ ಹಮಾರಾ 
ಸದಾ ಶಕ್ತಿ ಬರಸಾನೆ ವಾಲಾ ಮಾತೃ ಭೂಮಿಕಾ ಜನುಮನ ಪ್ಯಾರಾ
ವಿಜಯಾವಿಶ್ವತಿ ರಂಗಾ ಪ್ಯಾರಾ ಝಂಡಾ ಉಂಚಾ ರಹೇ ಹಮಾರಾ

4)ಗಾಂಧೀಜಿ ಪರ ನ್ಯಾಷನಲ್ ಕಾಂಗ್ರೆಸ್ (ಲಾವಣಿಯಲ್ಲಿ ):
ಏಯ್ ಬೋರ್ಡಿನ ಮ್ಯಾಲಿರುವ ಜೋಡಿ ಬಸವನ ಗುರುತ 
ನೀ$ಟಾಗಿ ನಿಂತು ಕೊಂಡ್ ನೋಡ; ಐತಾದ(ಚೆಂದ-ವಾದ)    

5)ಗಾಂಧೀ ತಾತನ ಭಾಷಣದ ಫರ್ಮಾನು:
ಎಕ್ಕಾ ರಾಜಾಕೋ ಮಾರೋ; ರಾಜಾಸೇ ರಾಣೀ ಕೋ ;
ರಾಣೀ ಸೇ ಗುಲಾಂ ಕೋ ;ನ್ಹೈಲೇಪೇ ದ್ಹೈಲಾ ;
ಸಮಝೋ ಪತ್ತಾಕಾ ಖೇಲ ಹೈ!!!      
6)ಗಾಂಧಿತಾತ ನ ಮಹಿಮಾಗಾಥಾ:
ಎಂಥಾ ಶಹಾಣ್ಯಾ ಮಹತ್ಮಾ ಗಾಂಧೀ ಹಿಂದುಸ್ತಾನ ಕವನ ತಂದಿ.

7)ಗಾಂಧಿಜೀಯವರು ಸ್ವಾತಂತ್ರ್ಯ ಕೊಡಿಸಿದ ದಿನ!!!
ದೇ$ದೀ$-ಹಮೇ ಆಝಾದಿ ಬಿನಾ-ಖಡಗ ಬಿನಾ-ಧಾಲ್ 
ಸಾಬರ್ಮತಿಕೆ ಸಂತ್ ತೂನೇ ಕರದಿಯಾ-ಕಮಾಲ್  
  
8)ಗಾಂಧೀಜೀ ಗುಂಡಿಗೆ ಬಲಿಯಾದ ದಿನ:
ಹಾ!! ಹಾ!! ಪಿತ!! ಭಾರತ ಹಿತ ಗಾಂಧೀ ಪೋದೆಯಾ!!! 

9)ಇಂದಿನ  ಸಾಂಕೇತಿಕ ಲಾವಣಿ:
ಯಾತಕ ಬಂತೂ ಎಲ್ಲಿಗೆ ಬಂತೂ ಹಿಂದೂಸ್ಥಾನಕ ಸ್ವಾತಂತ್ರ್ಯ  
           

No comments:

Post a Comment