Saturday 15 November 2014

ಸಂಪತ್-ಶುಕ್ರವಾರ !


ಸಂಪತ್-ಶುಕ್ರವಾರ !
ಶ್ರಾವಣ ಮಾಸ ಶುಕ್ಲ-ಪಕ್ಷ ತುಂಬಿದ ಮನೆ-ಮನೆಯಲ್ಲಿ ಹಳ್ಳಿ ತುಂಬಾ ಹಬ್ಬದ ವಾತಾವರಣ. ಅಂದು ಸಂಪತ್-ಶುಕ್ರವಾರ. ಊರಲ್ಲಿನ ಪಾರಂಪರೀಕ ನಮ್ಮ ಮನೆಯಲ್ಲಿ ತಲ -ತಲಾಂತರಿಯಿಂದ ಸಂಪ್ರದಾಯ ಹಬ್ಬ-ಹರಿದಿನ ನಡೆಸಿಕೊಂಡು ಬಂದ ಮನೆತನ. ಹಬ್ಬದೂಟ ಮುಗಿಸಿ ತಾಂಬೂಲ ಹಾಕುತ್ತಾ ಅಜ್ಜಿ-ಯನ್ನು ಕಂಡು ಉಭಯ-ಕುಶಲ ಮಾತಾಡಿಸಿ "ರಂಗಕ್ಕಾ ಹಬ್ಬಾ ಭರ್ಜರೀ ಆತ್ರೀ ಹೋಗಿ ಬರ್ತೇವೆ" ಎನ್ನುವಂತೆಯೇ; ಅಜ್ಜಿ "ಶಾಂತಕ್ಕಾ, ಗೌರಕ್ಕಾ ಸಂಜೆ ಸಾರಂಗಿ ಕಾರ್ಯಕ್ರಮಕ್ಕ್ ತಪ್ಪದ ಬರ್ರಿ" ಎಂದು ಬಾಯ್ತುಂಬ ಹರಿಸಿ ಕಳಿಸಿದರು. ಅದೇನು ನೆನಪಾತೋ ಏನೋ ಮನ್ಸ್ನ್ಯಾಗ "ನೋಡ್ರೀ ಎಲ್ಲಾ ವಿಧಿ ಮಕ್ಕಳು ಚಾಚೂ ತಪ್ಪದ..., "ಬಿಕ್ಕಿದರು. ಆಗ ಮರಿ ಮಕ್ಕಳು ಅವ್ವಾ "ಅಜ್ಜೀ ಕಣ್ಣೀರ್ ಹಾಕಾಕ ಹತ್ಯಾಳ" ಅಕ್ಕಾ ಬಂದು ನೇವರಿಸಿದಾಗ ", "ಎನಿಲ್ಲೇಳು ಏನೋ ಧೂಳ ಕಣ್ಣಾಗ ಹಾರಿ ಬಿತ್ತ್" ಅಂತಾ ಸಮಜಾಯಿಶಿ ಕೊಟ್ಟು ಮಾತು ಮುಗಿಸಿದಳು.
ಶಾಲೆ ಮಕ್ಕಳಿಗೆ ಅಂದು ಹಬ್ಬದ ಸೂಟೀ ಬೇರೆ. ಹಿರಿಯರು ಅವರ ಕಾರ್ಯಕ್ರಮದಲ್ಲಿದ್ದರೆ ಮಕ್ಕಳು ಮಸ್ತಾಗಿ ಅವರವರ ಆಟ-ಪಾಠದಲ್ಲಿ ಮುಳಗಿದ್ದರು. ತಮ್ಮ ಕೀಟಲಿ ಕಿಟ್ಟ ಆಕ್ಕನ ಗೋಳು ಹೊಯ್ಯುತ್ತಾ "ಮಡಕೇರಿ ಪ್ಯಾಟ್ಯಾಗ ಈರ್-ಭದ್ರ ಜ್ಯಾತ್ರ್ಯಾ$" ಅಕ್ಕಾ ಯೇನ್ಕಡ್ಮಿಲ್ಲ್ದ "ಗಡ್ಡ-ಮೀಸಿ ಹಚ್ಚಿ-ಕೊಂಡು" ಎನ್ನುತ್ತಲೇ ಮಕ್ಕಳ ಆಟಕ್ಕ ಚಿಗುರಿದ ಕಳೆ-ಬಂದಿತ್ತು.
ಸಾಯಂಕಾಲ ದನ-ಕರ ಕೊಟ್ಟಿಗೆ ಸೇರಿದ್ವು. ಮಕ್ಕಳು ಕೈ-ಕಾಲು ಮುಖ ತೊಳಕೊಂಡು "ಸ್ವಾಮಿ ದೇವನೇ" ಅಂದದ್ದ 'ವಿಠಲ ನ ಭಜನೆ ಮನದೊಳ$$' ಮುಗಿಸಿದರು. ಅಂದು ವಾರದ ಶುಕ್ರವಾರ ಅಕ್ಕ ಮಂಗಳಾರತಿಯಲ್ಲಿ, "ಸುಮಂಗಲಾ ನಮನ ತುಲಾ..." ಹೇಳೋದ್ರಾಗ ಕಿಲಾಡಿ ಕಿಟ್ಟ ಪುಥಾಣೀ ಸಕ್ರೀ ತಪ್ಪ$ದ ತಾ ಅನ್ನ-ಬೇಕೇ ?!. ಪುಣ್ಯಾಕ್ಕ ಅಜ್ಜಿಗೆ ಕೇಳಿಸ್ಲಿಲ್ಲ; ಆದ್ರೂ ಅಜ್ಜಿ ಏ ಕಿಟ್ಯಾ ಎಲ್ಲರಿಗೂ ಅಕ್ಕಾ ನ ಜ್ಯೊತೆ ಸುದಾಮ(ಅವಲಕ್ಕಿ) ಪ್ರಸಾದ ಕೊಟ್ಟು ನಮಸ್ಕಾರ ಮಾಡು ಎಂದು ಹೇಳಿದಾಗ ಕಿಟ್ಟಿಗೆ ಸ್ವಾಮಿ ಕಾರ್ಯ ಸ್ವಕಾರ್ಯ ಆಧಂಗಾತು.
ಅವ್ವಾ ನಾನಣ್ಣ- ವಿಮಲಾಅಜ್ಜಿ ಬಂದಾರ ಅಂದಾಗ ಅವ್ವ ಅವರನ್ನು ಒಳಗೆ ಬರಲು ಹೇಳುತ್ತಿದ್ದಂತೆ ಕಿಟ್ಟ ದತ್ತಣ್ಣ ಬಂದಾರ ಅಂದಾಗ ಅಪ್ಪ ಬಾರೋ ಗುಳಗಿ ಒಳ್ಯಾ ವ್ಯಾಳ್ಯಾಕ್ ಬಂಧಂಘಾತು,ಇವತ್ತಿನ್ ಕಾರ್ಯಕ್ರಮದಾಗ ನಿಂದ 'ಘಟ-ವಾದ್ಯ*' ನಡೆಸ ಬೆಕ್-ಮತ್ತ್ -ನೋಡಪಾ! (*ಕೊಡದ ಮೇಲೆ ಬಾರಿಸುವ ಕಲೆ) ಅಕಾ ಶೇಷಣ್ಣ ಮುರಲೀ (ಕೊಳಲು) ಬ್ಯಾತನಾಳ ಹೆಗ್ಗಾ-ಭಟ್ಟ ತಬಲಾ ಹಂಗ ಮೀಸೀ ಹನಮ್ಯಾ ಹಾರ್ಮೊನಿಮ್ ತರತಾರ!
ತಬಲಾಜೀ ತಬಲಾಠಿಕ ಮಾಡ ತಿದ್ಧ್ಂಘ ಥೇಕಾ ತಾ$ತಾ ತಿಕ್ಕಿ$ಟ್$ತಾ ಅನಿತಿದ್ಧ್ಂಘ ಕೊಂಕಣಿಗರ ಬಾಬುರಾಯ$ಗ ಜೋಶ ಬಂದು ಏನೋ ಅಂದ ಬಿಟ್ಟ ಮಜಾ ಕೇಳ್ರೀ "ಹಾಂವ್ ತುಕ್ಕಾ ನಾಕ್ ಝಾಲ್ಯಾರ್ ತೀ ತುಕ್ ನಾಕ್ ಝಾಲ್ಯಾರ್ ತಿಕ್ಕಾ-ಮಕ್ಕಾ ದೀ "! ವೊವ್ಹ್ ಹೆಗ್ಗಾ-ಭಟ್ಟರ ತಬಲಾಕ್ ಕಳೆ ಬಂತು!
ಮೀಸೀ ಹನಮ್ಯಾನ ಹಾರ್ಮೊನಿಮ್ 'ನಿಮ್ಮಪ್ಪಾ- ಧಪ್ಪಾ ನಿಮ್ಮಮ್ಮ-ಸಣ್ಣಾ ನೀ-ಧನೀ$, ಸನಿ$, ಧಪಾ ಗಾಮ$ಪಾ$$ ಗಾಮಾ--ಗರೆ$ಸಾ$$' ವಾವ್ ಧನೀ ಸಾದ್ ಮಾಡೇ-ಬಿಟ್ಟ!
ಭರತ-ನಾಟ್ಯದ ಶಾರದಕ್ಕ ಸಾರಂಗಿ ಅಕ್ಕಾಗ ಗೆಜ್ಜಿ ಕಟ್ಟಿಸಿ ತ ಣ್-ಧೀರೆ ತೋಂ ತಂಣಾ ತ ಣ್-ಧೀರೆ ತೋಂ ನಿತ್ತಾಂಗ್-ಧಿಕ್-ಧಿಕ್ ಥೈ ಅಂತಾ ತಾಲಿಂ ನಡೆಸಿದಾಗ ಕಿಟ್ಯಾ ಸಂಣ್ ಕ ಒಂದು-ಬಿಲ್ಲಿ ತಕ್ಕ್-ಥೈ ಬಿಲ್ಲಿಗೇ ಮೂರು ಪೈ ಅಂದ ನಕ್ಕ್ ಸಾರಂಗಕ್ಕನ ತಾಲಿಂ ಮಸ್ತ್ ಆತು!
ಸಾರಂಗಿ ಕಾರ್ಯಕ್ರಮದಲ್ಲಿ 'ಕೃಷ್ಣಾ ನೀ ಬೇಗನೇ ಬಾರೋ ಮುಖವನೇ ತೋರೋ', 'ಆಡ ಪೋಗೊಣು ಬಾರೋ ರಂಗಾ ಕೂಡಿ ಯಮುನೆ ತೀರದಲ್ಲಿ''ಮಧುವನದಲಿ ಕುಣಿದಳೋ ಆ ರಾಧೇ.. ಮೋಹನನಾ ಮುರಲಿಯಾ ಸ್ವರ ಕೇಳೆ','ಕಾಲಿಗೆ ಗೆಜ್ಜೆಯ-ಕಟ್ಟಿ ಮೀರಾ ಕುಣಿದಳೋ', 'ಕಾಹೇ ಘಟಾಮೇ ಬಿಜಲೀ ಚಮಕೀ' ವಾಹ್ ವ್ಹಾ-ವಾಹ್ ವ್ಹಾ ಕರತಾಡನ ಗಳ ಸದ್ದಲ್ಲಿ ಕಣ್ಬಿಟ್ಟಾಗ ಮೂಡಲ ಮನೆ ಸೂರ್ಯ ಕೆಂಪಾಗೆದ್ದಿದ್ದ ಹಕ್ಕಿ-ಕಲರವ್ದಾಗ್ ಅವ್ವಾಅಂತಿದ್ಲು"ಯಾಕೋ ಪುಟ್ಯಾ ಇನ್ನೂ ಮಲಗ್ಯಾನ" ಎದ್ದು ನೋಡಿದ್ರ ಎಲ್ಲಿ ಅವ್ವಾ ಅಪ್ಪಾ ಅಕ್ಕಾ ಭಾವಾ ಅಣ್ಣಾ ಎಲ್ಲಾ ಮೋಡೀ ಮಾಡೀ ಹೋದ ತಲೆ ಮಾರು ಗಳು ಕಂಡ ಮನೆತನದ ಮನೆ ಬಿಕ್ಕೋ ಎನ್ನುತ್ತಾ ಕಾಲಾಯ ತಸ್ಮೈ ನಮಃ ಎನ್ನುವಂತೆ ಕಾಣು ಕಂಡ ಕಥೆ ನಾಲ್ಕು ಸಾಲು ಗೀಚಿದೆ ಇನ್ನೇನು ಮಾಡಲು ಸಾಧ್ಯ ಇಷ್ಟ ವಾದರೆ ಓದಿ ಮರೆತು ಬಿಡಿ.
B.R. Bhate, at Slough-U.K. Dt: 14-11-2014

Tuesday 11 November 2014

ಶುಭೋದಯದ ಇಂದು ಬೆಳಗು ಹಾಡುತಿದೆ "ಈ(e-ಕನ್ನಡ)"!!!


ಶುಭೋದಯದ ಇಂದು ಬೆಳಗು ಹಾಡುತಿದೆ "(e-ಕನ್ನಡ)"!!!

"ಏಳೋ ಗೋವಿಂದಾ, ಏಳೋ ಗೋಪಾಲಾ!" ಅಂತ ಅಪ್ಪನ ಕಂಠ ಬಿರೀ-ತಿತ್ತಂದ್ರ, ಖಂಡಿತ-ಬೆಳಕಾಗಿರ್ತದ.. ಅಂತ ಅನ್ನೋದರ ವಳಗ 'ಎದ್ದು ನೋಡಿದ್ರ', ಮನ್ಯಾಗ-ಇನ್ನೂ-ಕತ್ತಲಿ ಬೆಳಕ-ಹೆಂಗ-ಕಾಣಬೇಕು, ಮತ್ತ ಮುಸುಕು-ಹಾಕೊದ್ರಾಗ; ದೆವ್ವನ-ಕೇರಿ-ಮುಲ್ಲಾನ ಮೈಕಿನ-ಧ್ವನಿ, "ಅಲ್ಲಾ ಹೋ ಅಕ್ಬರ್" ಅನ್ನುವದಕ್ಕೂ, ಛಪ್ಪರ-ಬಂದ್ ಬಾವಾ-ಸಾಬನ ಕೋಳಿ-ಹುಂಜ ಗಳು, 'ಕೊಕ್ಕ್-ಕೋ$ಕೋ'... ಆಕಾಶವಾಣಿ-ಆಗೋದ್ರಾಗ, ತುರಬೀಗುಡ್ಡ-ಮೂಡೀ-ಸ್ವಾಮಿಗಳ ಮಠದ 'ಝಾಗಟೇ-ಸದ್ದು', ಕ್ವಾಟಿ 'ದತ್ತಾತ್ರೇಯ-ಗುಡಿ' ದಿಂದ 'ಶಂಖನಾದ' ಕೇಳಿಸ್ತು ಅಂದ್ರ; ಕಕ್ಕಡಾರತೀಗೇ ಮಬ್ಬು-ಕತ್ತಲು ಸರಿದಿರೋದು ಗ್ಯಾರಂಟೀ. ಅನ್ನೋದ್ರಾಗ ನಿಲ್ಲದ-ಮುಲ್ಲಾನ-ಧನ್ಯಾಗ ಓಣ್ಯಾಗಿನ-ನಾಯಿ ಓ-ಎಂದು-ಊಳಿಡುವದು ಸಾಮಾನ್ಯ. ಗೌಳಿ-ಬಸ್ಯಾನ ಆಕಳು ಗಳು'ಅಂಬಾ' ಎನ್ನುವದಕ್ಕೂ; ಹಿತ್ತಳದಾಗಿನ ಬೆಣ್ಣಿ-ಸಂಗಪ್ಪನ ಎಮ್ಮೆ,'ಆಂಯ್' ... ನಿಲ್ಸೋದ್ರಾಗ; ಕುರುಬರ-ಬೀರಪ್ಪನ ದೊಡ್ದೀಂದ ಕುರಿಗಳ 'ಬ್ಯಾ$ಬ್ಯಾ'...
ಇವೆಲ್ಲಾ-ನಮ್ಮೂರಾಗಿನ 'ಆರ್ಕೇಸ್ಟ್ರಾ' ಆರಂಭ-ಆಗೋದ್ರಾಗ; ಅಗಸರ ಅಂದಾನೆಪ್ಪನ-ಕತ್ತೆಗೇ 'ಮಾಮೂಲಿ-ಶಿವಪ್ಪ' ಎದ್ದಾನೋ? ಇಲ್ಲಾ--ನೋಡಾಕ 'ಹಜರತ್' ಇಮಾಮ ನನ್ನೇ ಪ್ರಶ್ನಿಸುವಂತೆ "ಹಜರತ್ ಹಾಯ್$ ಕೀ-ನೈಕೀ?"... ಅನ್ನೋದ್ರಾಗ ಶಿವಪ್ಪನ- 'ಡೊಣ್ಣೆ-ಏಟು', ಸಿಕ್ಕತೋ-ಏನೋ! ಪಾಪ. ' ಹೀ$$ ಹೀ' ಎನ್ನುವ ಕುಡ್-ಖಾದೀರ ನ ಕುದರಿ ಸದ್ದು ಇಷ್ಟೆಲ್ಲಾ 'ಹಾಜ್ರೀ' ಕೊಟ್ಟಾಗ ನಸುಕೇನು, ಬೆಳ್ಳನ ಬೆಳಗೇ!
ಎದ್ದು ಹಾಸಿಗೆ-ಹಚ್ಚಡ ಮಡಚಿ; ಬಚ್ಚಲಿಗೆ ಹೋಗಿ ಹಲ್ಲುಜ್ಜಿ ಮುಖತೊಳಕೊಂಡು; ಫ್ರೆಶ್-ಆಗೀ, ದೇವರಿಗೆ ಕೈಮುಗಿತಿದ್ಧಂಗ: 'ಸಣ್ಣಕ್ಕ' "ಎಷ್ಟೊತ್ತಪಾ! ಏಳ್ಲಿಕ್ಕೆ!! ಮಾವಷಿ ಕರೆದದ್ದು ಕೇಳಿಸ್-ಲಿಲ್ಲೇನು?" ಬಾ-ಎಂದು ಮಣೆ ಹಾಕೀ; ಎದುರಿಗೆ ಬಿಸಿ-ಬಿಸಿ ಕಾಫೀ-ಕಪ್ಪು ಇಟ್ಟಳು. "ಇಲ್ಲ್ ಸಣ್ಣಕ್ಕಾ, ರಾತ್ರೀ ಕೆಲ್ಸ್ ಮುಗ್ಸಿ ಬರೋದಕ್ಕ ತಡಾ-ಆಗೀ ಮಲಗಿದ್ದೆ". "ಈಗ-ಲಗೂನ-ಹೋಗಬೇಕಾಗೀದ". ಅಂತ ಒಂದ್ ಸಣ್ಣ ಸುಳ್ಳು ಹೇಳಿ ಕಾಫೀ ಕುದೀತಿದ್ಧಂಗ ಆಕಾಶವಾಣಿ "ಬೆಳ್ಳನ ಬೆಳಗಾ ಆಯಿತು ... " ಕೇಳ್ತಿದ್ದ್ಂಘ ಪಡಸಾಲ್ಯಾಗ ಆರಾಮ ಖುರ್ಚಿ ಮ್ಯಾಗ ಕುಂತೆ.
ಹೊರಗ ಬಾಗಿಲದಾಗ ಸೂರ್ಯನ ಕಿರಣ ಪಸರಿಸಿತ್ತು. ಕೈಯಾಗ ವರ್ತಮಾನ ಪತ್ರ ಹಿಡಿತಿದ್ದ್ಂಘ ರಾರಾಜಿಸಿದ್ದು ಶುಭೋದಯ "ಕನ್ನಡ ರಾಜ್ಯದ ಸಮಸ್ತ ಜನತೆಗೆ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು "
ಇತ್ತ ತಂಗಿ, ಹಾರ್ಮೊನಿಮ್ ಹಿಡಿದು; ಸುಪ್ರಭಾತದ ಪದ " ಮೋದದಿ-ನಗಿಸುತಾ ಮಾತೆಯ-ಅರುಣಾ " ಹಾಡುತ್ತಿದ್ದಂತೆ ತಮ್ಮನ 'ಪ್ರಭಾತ್ ಭೇರಿ ತಾಲಿಮ್', "ತಾಯೇ ಬಾರೇ ಮೊಗವ ತೋರೆ ಕನ್ನಡಿಗರ ಮಾತೆಯೇ ".
ಅಂದು ಧಾರವಾಡದ ಹುಯಿಲಗೋಳ ನಾರಾಯಣ ರಾಯರು " ಉದಯ ವಾಗಲಿ ನಮ್ಮ ಚೆಲುವ ಕನ್ನಡ ನಾಡು " ಗಾಗಿ ಗರ್ಜಿಸಿದ್ದರು.
ಇಂದು ಬದುಕಾಗಲೀ ಕನ್ನಡ ಎನ್ನುವ ಅನುಷ್ಠಾನ ಚಿಂತನೆ ನಡೆದಿದೆ. ನಾಡು-ಕನ್ನಡ ನುಡಿಯು-ಕನ್ನಡ ಮನೆ-ಮನ-ಜನ ದನಿಯು ಕೂಡ ಹಾಡುತಿದೆ "(e-ಕನ್ನಡ)"!!!
B.R. Bhate, at Slough-UK. Dt:01-11-2014

Tuesday 30 September 2014

ಹೀಗೊಂದು Uk-ಸಫಾರಿ-ಪಾರ್ಕು!'ಲೌಲಿ-ಲಾಂಗ್-ಲೀಟ್ ಮಂಗ್ಯಾನ ಕಾಡು'!.


ಹೀಗೊಂದು Uk-ಸಫಾರಿ-ಪಾರ್ಕು!'ಲೌಲಿ-ಲಾಂಗ್-ಲೀಟ್ ಮಂಗ್ಯಾನ ಕಾಡು'!.
(ನಮ್ಮೂರ ಬೆಟ್ಟದ-ಮಂಗ್ಯಾಕಥಿ-ಹ್ಯಾಂಗ್-ಐತಿ!)
ವಲಯ ಪ್ರವೇಶಿಸುವ ಮೊದಲು ರಸ್ತೆಯ ಬದಿಯಲ್ಲಿ ಅಲ್ಲಲ್ಲಿ ರಾರಾಜಿಸಿದ ಮಾರ್ಗದರ್ಶಿ ಕೋಲು-ಫಲಕಗಳು ಪ್ರವಾಸಿಕರ ಗಮನ ತಮ್ಮತ್ತ ಸೆಳೆಯುತ್ತವೆ.ಅವುಗಳನ್ನು ಒಂದೊಂದಾಗಿ ಓದುತ್ತ ಹೋದಂತೆ ವಿಕ್ಷಕರಿಗೆ ಎಚ್ಚರಿಕೆ ಗಂಟೆ ಯಾಗ ಬೇಕು. ಕೆಂಪು-ಮಾರಿ-ಮಂಗಗಳ ಹಾರು/ನೆಗೆತ ತುಂಟಾಟ!'ಈ ಉಸಾಬರಿ ನಿಮಗೆ ಬೇಡ ವಾದರೆ ಸರಿ ಕೈಮರ-ತೋರಿಸುವ ಬದಿ ದಾರಿ ಹಿಡಿದು ನಿವಾಂತ ನೆಮ್ಮದಿ ದಾರಿ-ಹಿಡೀರಿ. ಆದರೆ, ಅದು ಹಾಗೆ-ಆಗುವದಿಲ್ಲ, ಎಂಬುದು ಈ ನಿದರ್ಶನ ಮನವರಿಕೆ ಮಾಡಿ ಕೊಡುತ್ತದೆ. ಫಲಕಗಳು ಕಣ್ಣು ಪಟಲ ದೊಳಗೆ ಓದಿಸುತ್ತಾ ಸಾಗುತ್ತವೆ. ನೀವೇ ನೋಡಿ ಈ ಸೋಜಿಗವನ್ನು!!!.
ಕೋತಿಗಳಿವೆ ಜಾಗೃತೆ ! ಮೊಂದಾಗುವ ಹಾನಿಗಳಿಗೆ ನೀವೇ ಹೊಣೆ ! ಮುಂದಿನ ಫಲಕ ಮತ್ತೆ
ಕೊಟ್ಟಿತು. 'ಎಚ್ಚರಿಕೆ!' ಗಮನಿಸಿ:- ಇಲ್ಲಿಂದ ನೀವು ಕೋತಿ-ವಲಯಕ್ಕೆ ಪ್ರವೆಶಿಸಿದ್ದಿರಾ....! ಮತ್ತೆ ಅದೇ ಒದರು ಬೋರ್ಡು "ಮಂಗವಾಣಿ”: 'ಎಚ್ಚರಿಕೆ':- "ನೀವು ನನ್ನ ವನವಿಭಾಗ ಪ್ರವೆಶಿಸಿದ್ದೀರಾ! ನಮ್ಮ ಕಿಲಾಡಿಗಳ ಬಗ್ಗೆ ಹುಷಾರಾಗಿರಿ”. "ಅವರು ನಿಮ್ಮ ವಾಹನ ಮೇಲೆ ಹತ್ತಿ ಅದನ್ನು ಹಾನಿಯನ್ನುಂಟುಮಾಡಬಹುದು”. ಛೇ ಹೌದೇ!'ಪಾಪದ-ಮಂಗಗಳು'. 'ಅವೇನು-ಮಾಡಿಯಾವು'. 'ಹಳ್ಳಿ-ಬಿಟ್ರ-ನಮಗೆ ಅವು-ಪುನಃ-ಎಲ್ಲಿಸಿಗಬೇಕು?' “ಕಾರೊಳಗ-ಇದ್ದೇವೆ ಹೋಗಿ-ನೋಡೇ ಬಿಡೋಣ”!
ಕೈಮರದ-ಫಲಕ ದಿಟ್ಟವಾಗಿ-ಹೇಳುತ್ತದೆ, ಅವುಗಳ ಕಿಲಾಡಿ-ತುಂಟತೆ ಮೋಜು-ಮಸ್ತಿ ಮ್ಯಾಜಿಕ್ಕು ಮತ್ತೆ ನಮಗೆಲ್ಲಿ ಸಿಗಬೇಕು. -ಗಿಡಮಂಗ್ಯಾನ ಆಟ ಸರಿ ಕಂಡೇ-ಬಿಡೋದು. ಮಂಗನ ವಾಣಿ ನೋಡಿದಿರಾ!!! ಇದು ಮಂಗ ತಾಣ ಕ್ಕೆ ಬರಲು ಇಲ್ಲಿ ಬಲಗಡೆಗೆ ತಿರುಗೀ(ಸ್ವಲ್ಪ ನಮ್ಮ-ಮಜನೋಡಿ) ಆಗುವ ಹಾನಿಗೆ ನೀವೇ ಬಲಿ ಪಶು!!!
ಶಿರೋನಾಮೆ-ಶೀರ್ಷಿಕೆಯ ಎಚ್ಚರಿಕೆ ! ಆದರೆ ಲಕ್ಷಕ್ಕೆ-ತಾರದವರು ಕೊನೆಯಲ್ಲಿ ಕೆಲವೊಮ್ಮೆ ಅದಕ್ಕೆ ದುಬಾರಿ-ಬೆಲೆ ತೆರುತ್ತಾರೆ. ಪ್ರವಾಸಿಗರನ್ನು ಕಂಡ ಕೋತಿ ಹಿಂಡು ಕುಲ-ಕಸುಬು-ಕಿಲಾಡಿತನ ಸುರು-ಮಾಡುತ್ತವೆ ಒಹ್ ತಮಾಷೆ ಕೋತಿಗಳು ಕಾರನ್ನು-ಏರಿದವು. ಆಹಾ! ಎಂಥ ಅದ್ಭುತ ಜಂಪು! ಒಂದೆಡೆ ಚಳಿ-ಮಂಜು ತಟ-ತಟ ಮಳೆ-ಬಂತು-ಮಳೆ!
ಮಳೆ ಬೀಳುತ್ತಿರುವಾಗ ಕಾರ-ನೇರಿ ಕುಳಿತ-ಕೋತಿಗಳು ಮಳೆ-ಚಳಿಯಲ್ಲಿ ನಡುಗುತಿರುವ-ತಮ್ಮನ್ನು, ಕಾರೊಳಗೆ-ಅನುಮತಿಸಲು-ರೋದಿಸುತ್ತಿರುವಂತೆ ಮಾಡುತ್ತವೆ. ಅದೋ ಅಲ್ಲಾಡುತ್ತಿರುವ ಕಾರಿನ ವೈಪರು! ಅವುಗಳ ಕೆಂಗಣ್ಣಿಗೆ ಗುರಿಯಾಗುತ್ತವೆ.ಓಹೋ ಕುಪಿತ ಸಿಡುಕನ ಕೆಲಸ! ಅಯ್ಯ ಶಿವ್ನ ಲೇ ಹನಮ್ಯಾ, ತಗಳ್ಳಪ್ಪ ಹೇಳಿ-ಕೇಳಿ-ಮಂಗ್ಯಾ ಬಿಟ್ಟೀತ ಅದನ್ನ!
ಎಲಾ ಇವ್ನ ಹಿಡ್ಕೊಂಡು ಜಗ್ಯಾಡಿ ಕಿತ್ ಬಿಟ್ತಲ್ಲಲೇ ಹಾಳ್-ಮಂಗ್ಯಾ!ಹಾಳಾಗ್ಲಿ ಶಿವ್ನ ಗ್ಲಾಸ್ ಒಡ್ದು-ಒಳಾಕ ಬರ್ದಿದ್ರ ಸಾಕು! ತಮ್ಮಾ ಒಸಿ-ಗಾಡಿ ದೌಡು-ಬಿಡು, ಹಾಳಾದ್ದು ಬಡ್ಕೊಂಡೆ-ಬ್ಯಾಡ ಇವ್ಗಳ
ಸಹವಾಸ! ಆಹಾ! ವೈಪರ್ ಕಥೆ-ಮುಗಿತು.
ವಾಹ್! ಸೇನಾ-ದುರಂಧರರು ಕಾರಮೇಲೆ ಹೈಜಂಪ್ ಮಾಡೇ-ಬಿಟ್ವು, ಒಂದೇ ನೆಗೆತಕ್ಕೆ ಕಾರು ಹಿಗ್ಗಾಮುಗ್ಗು. ಒಟ್ಟಾರೆ ಕಾರಿನ ಬಂಪರ ಕಥೆನೂ$ಮುಗಿಸಿದವು, ಅಯ್ಯೋ ಎಲ್ಲಾ ಹಾಳು
ಮಾಡಿದೆ ಮರ್ಕಟಕ ಮೂರ್ಖ! ನೀನೋ ನಾನೋ ?!
ಫಲಕದ ಬರಹ ಮರುಗಿತು 'ಅಯ್ಯಾ ಹಣೆಬರಹವೇ'!
ಆದರ-ಕಾ$ಕಾ, ಅದು ಸಮ್ಯಾನ ಕಾರಿನ-ಕಥಿ ! ಮತ್ತ ನಮ್ದು-ಕಥಿ ಸಫಾರಿ ದಾಟಿ ಕಾರು-ನಿಲ್ಲಿಸಲಿಕ್ಕೆ
ಅವಕಾಶ ಸಿಕ್ಕಾಗ-ಗೊತ್ತಾಗೋದು ಆ ಯಂಕಪ್ಪಗ ಗೊತ್ತು ಅದರ ಕಥಿ! ಸೈ ಬಿಡು ಅವ ಮಾಡಿದಂಘ ಆಗಲಿ. ಎನೂ ಹಾನಿ ಆಗಿಲ್ಲವೇ! ಒಹ್ ನಿಜವೇ? ಅತ್ಯುತ್ತಮ ಕೆಲಸ ಮಾಡಿದ ಬಿಡು! ಸೊಗಸಾದ-ಕಿರಿಚು/ಭಯಂಕರ--ನೆಗೆತ! ಮಿಸ್ಟರ್ ಕಿಲಾಡಿ ಮರ-ಗೋತಿಗಳಿಂದ ಎಂಥಾ ಸುರಕ್ಷಿತ ಭದ್ರತೆ ಸಿಕ್ಕದ್ದು!ಮನಸ್-ಮಾಡಿದ್ರ್ ಮೀಸಿ-ಗುರು-ಬಸ್ಯಾನ್ ಕಥಿ ದೊಡ್ದದ-ಬಿಡು, ಈಗ ಬ್ಯಾಡ.
ನಿಜಕ್ಕೂಕಿರಿಚು-ಕುಚೇಷ್ಟೆ-ಕೋತಿಗಳ ಜ್ಯೊತೆ ಇದೊಂದು ನಮ್ಮ ಪಾಲಿಗೆ, ಲಾಂಗ್ ಲೆಟ್ಟಿ ನಲ್ಲಿ ಕಳೆದ ಸುಂದರ ದಿನ ಅವಿಸ್ಮರಣೀಯ ದಿನವೇ!
ಈ ಪಡಿಪಾಟಲಿನ್ಯಾಗ ಸಿಕ್ಕದು ಮುಗಿತು.. ಈಗ ಹೇಳಿ ಹುಚ್ಮಂಗ್ಯಾನ ಹಾವಳಿ ಕಾಡ್ನ್ಯಾಗ ಹೋದವರ ಪ್ರಶ್ನೆ ಇಲ್ಲಿ ನಿಜವಾದ ಮಂಗ್ಯಾ ಯಾರು?

B.R. Bhate at Slough UK. Dt:30-09-2014

Monday 28 July 2014

Rain Rain Pour again We want you to Again,Again!

ಮಳೆ ಅಣ್ಣಾ ಬಾರಣ್ಣ, ಬಾರಣ್ಣ ಓ$ ಮಳೆ ಅಣ್ಣಾ
ಹನಿ-ಹನಿ ಕೂಡಿ, ಹಳ್ಳ ಹರಿಸಿ, ಕೆರೆ-ಕಟ್ಟೆ-ತುಂಬಿಸಣ್ಣಾ   ।। ಪಲ್ಲ ।।
ಹಳ್ಳ-ಹೊಳೆ-ತುಂಬಲು, ಹೊಲ ತುಂಬಾ-ಬೆಳೆ-ಅಣ್ಣಾ
ಮಳೆ ಬನ್ಧಂಘ ಛತ್ರಿ ಹಿಡಿದು, ಆಡುವ ಆಟ ಮೋಜಣ್ಣ
ಹೆಸರಿಗೆ ಛತ್ರಿ ಮಳೆಯಲಿ ನೆನೆಯಲು, ಮಕ್ಕಳ ಆಟ ಮಜಾ ಅಣ್ಣಾ ।।೧ ।।
ಬಣ್ಣಾ ಕೊಡುವೆನು ಬಾರೆಲೇ ಮಳೆಯೇ,
ಸುಣ್ಣಾ ಕೊಡುವೆನು ಸುರಿಯಲೇ ಮಳೆ ಯೇ,
ಜೋಡಿಸಿ ಅಜ್ಜನ ಹಾಡನ್ನ ಹೊಡಿ ಝಾಪಾಟಿ ನೀ ಕಟ್ಟೀ ಪ್ಯಾಟಿ ।। ೨ ।।
ಹುಚ್ಚು ಮಳೆ ಅನ್ನುವರಣ್ಣ ನಿನಗದ ಚಿಂತೆ ಬೇಡಣ್ಣ
ಕಾಡಿದ್ದರೆ ಮಳೆ,ಮಳೆ ಇದ್ದರೆ ಬೆಳೆ ಕೊಡುವೆ ಚಿನ್ನ ಕಾಣಣ್ಣ         
ಚಲಿಸುವ ಮೋಡದ ಗುಡು-ಗುಡು-ಗಗನ ಸಿಡಿಲು-ಮಿಂಚು-ಮಕ್ಕಳುಅಣ್ಣ ।। ೩ ।। 
B.R. Bhate at Slough(uk) Dt:30-07-2014

Friday 25 July 2014

ಕರುನಾಡು ನಮ್ಮ-ನಾಡು, ಎಲ್ಲ-ಬದುಕಿನ-ಬೀಡು, ಎಲ್ಲಕ್ಕೂ-ಬಲುಸವಿ ನಮ್ಮ-ಕನ್ನಡ ಹಾಡು

ಕರುನಾಡು ನಮ್ಮ-ನಾಡು, ಎಲ್ಲ-ಬದುಕಿನ-ಬೀಡು, ಎಲ್ಲಕ್ಕೂ-ಬಲುಸವಿ ನಮ್ಮ-ಕನ್ನಡ ಹಾಡು
ನಿನ್ನೆ ಗಳ ನೆನಪಿನಲಿ ನನ್ನ-ಮನವದು-ತಿರುಗೆ, ಅಂತರಾಳದ ತಿರುಳು-ತಾ-ತೂಕ-ಹಾಕೆ
ಅಂಗಾಯಿ-ಮಂಗಾಯಿ ತಾಯಿ-ತೊಟ್ಟಿಲೊಳು, ಜೋಗುಳದ-ಹಾಡುಗಳ, ಕಿವಿನಿಮಿರೆ-ಕೇಳು
ತೊಟ್ಟಿಲಗಳಿಂದಿಲ್ಲ ತಟ್ಟಿದರೆ ಸಾಕಲ್ಲ, ತಟ್ಟು-ತಟ್ಟುತ ಜೋಗುಳಗಳು ಬರ-ಬೇಕಲ್ಲ ।। ೧ ।।
ಅಂತರ ತಾಣದೊಳು, DVD ಹಚ್ಚಿದರೂ ಸಿಕ್ಕರೂ-ಸಿಗಬಹುದೇ? ಹುಡುಕಿದರೆ ನೋಡು!
ಬರೆದಿದ್ದರೇ-ಅಂದು ಬಾಯಿಗೂಡಿದ-ಹಾಡು, ನೀ-ಹಾಡದಿರೆ ಮುಂದು ತಂತಾನೇ-ಬಂದೀತೆ?
ದುಡ್ಡು-ಗುಡ್ಡು ಇರಬಹುದು, ಬಡ್ಡಿ-ಹಾಕಿದರೇನು ಚಡ್ಡಿಗೂ-ಸಾಲದದು ಮುಂದೆ-ನೋಡು ।।೨ ।।
ಹೆಚ್ಚು-ಹೇಳಲು ಏನು? ಜಾಣ-ಮಕ್ಕಳು-ಕೇಳು. ಕಲಿಸಿದುದ-ಕಲಿಯುವವು, ಮಧುರ-ಹಾಲ್ಜೇನು.
ಮಕ್ಕಳಿಗೆ ವಿದ್ಯೆ ಬಾಲ್ಯ ದೊಳು ಬೇಕು ಚೆಲುವು ಕಂದನ ಹಾಡು ಡಿಂಡಿಮ ಧ್ವನಿಯ ಕೇಳು
ಹುಡುಕಿ-ಮಿಡುಕಿದರೂ ತೊಡುಕಿನೊಳು ಮಿಂಚೀತೆ ಎದ್ದು ನನಸಾಗು   ।। ೩ ।।            
B.R. Bhate, at Slaugh(uk). Dt:25-07-2014

Thursday 26 June 2014

(ಆಗಸದಿ-ತೇಲುತಿಹ ಮೋಡ-ಮುಂಗಾರು!)

ಗುನು-ಗುಣಿಸಲು-ಮನವು, ಚೆಲುವ-ಕಂದನ-ಹಾಡು! (ಆಗಸದಿ-ತೇಲುತಿಹ ಮೋಡ-ಮುಂಗಾರು!)   

ಬೇಸಿಗೆಯ-ಸುಡು-ಬಿಸಿಲು ಬೆವರಿಳಿಸು-ತಿರಲು, ಬಡಗು-ತಿಲ್ಲಾಣಗಳು, ತೆಂಕಟ್ಟು-ಸೀಮೆಯೊಳು.
ಬೀಸು ಸುಳಿಗಾಳಿ$ತಾ ಮಲೆ-ಬೆಟ್ಟಗಳ-ಮೇಲೆ, ಕಾರ್ಮೋಡಗಳ-ಸುಳಿವು ಮೆಲ-ಮೆಲ್ಲ-ತಾತರಲು.
ಕಡಲ-ತೆರೆ-ಅಬ್ಬರದ, ತೆರೆ-ಏಳು-ಬೀಳುಗಳು, ಚೆಲ್ಲಾಟ-ನಿಟ್ಟುಸಿರು, ದಡಕೆ-ಕೊಟ್ಟಾವು.        || ೧ ||

ತೆಂಕಣದ-ಸುಳಿಗಾಳಿ, ಕೊಂಕಣದೇ-ಬೀಸುತಿರೆ, ಆಗಸದಿ-ತೇಲುತಿದೆ, ಮೋಡಗಳ-ಬೆರಗು.
ಗುಡು-ಗುಡುಗಿ-ಸುತ-ಮೋಡ, ಛಟ್-ಸಿಡಿಲು-ತಾಸಿಡಿದು, ಬೆಟ್ಟ-ನೆಲ-ನಡುಗಿಸಲು,
ಕೋಲ್-ಮಿಂಚುತಾ$ಮಿಂಚು, ಮೋಡಗಳ-ತಾ$ತಣಿಸೆ, ಜಗಕೆಲ್ಲ-ಹರುಷ, ಮುಂಗಾರು-ತಂತು.|| ೨ ||

B.R. Bhate, Dharwad. Dt:27-06-2014

Friday 20 June 2014

ಈಗ-ರೂ$ಪಾಯ್$ಗೆ ನವಾ-ಪೈಸಾ-ನೂರು!

ದುಡಿಮೆ ದುಡ್ಡಿನ-ಆಣೆ, ಠ೦ಠಣ-ಗೋಪಾಲ. ಗೋವಿಂದ-ಕೇಳೋ, ಗೋಪಾಲ-ಹೇಳೋ[ಅಂದು-ಇಂದು]   
ಚವಲಿ-ಪಾವಲಿ, ಕಾವ$ಲಿ$ನಚೀಲ ನಾಕಾಣೆ, ನದ-ಚಕ್ರ,ಎಂಟಾಣೆ$ಅಂದು-ರೂಪಾಯಿ,
ಪೈಸೆ-ತೂ$ತಿನ-ಬಿಲ್ಲಿ, ದುಗ್ಗಾಣಿ-ಅರ್ಧಾಣೆ, ದಮ್ಮಡಿ-ಅಳಿ$ಲೆಖ್ಖ, ಎಲ್ಲವೂ$ಬಾಯಿಯಲಿ.
ಬಿಲ್ಲಿ$$-ತಕ್ಕ್-ಥೈಎನಲು, ಚಿಲ್ಲರೆಗೆ$ಅಂದಾಗ ಬಿಲ್ಲಿಗಗೇ-ಮೂರು-ಪೈ, ಕಾಸಿಗೇ-ಗುರು-ಸಿದ್ಧ. || ೧ ||
ದೊಡ್ಡವರು ಮಾತಂದ್ರ, ಬಿಲ್ವಾರ,ವಡ್ಯಾಣ, ಕಮ್ಮಿ-ಇಲ್ಲ ಟಿಕ್ಕಿ-ಇಕ್ಕೇರಿ-ವಜ್ರ.
ಸುಂಕೇರಿ-ಲಾಂದ್ರ, ಝಣ-ಝಣ ಅಂದ್ರ, ರೂಪಾಯಿ-ಎಣಿಸಲು, ಬೆಳ್ಳಿ-ಭಂಗಾರ.
ಈಗ-ರೂ$ಪಾಯ್$ಗೆ ನವಾ-ಪೈಸಾ-ನೂರು, ಸೇರಿಗೆ-ಸವ್ವಾ$ಸೇರು ಎಲ್ಲಾ ಠಣ-ಠಣ-ಕಾಣು! ||೨||
B.R. Bhate, Dharwad. Dt:20-06-2014

Wednesday 4 June 2014

ಅರಸು-ಮಕ್ಕಳಿಗೂ ಸಿಕ್ಕದ-ಸೊಗಸು, ವರಕವಿ-ಕಾಣುವ ಸೃಷ್ಟಿಯ-ಸೊಬಗು

ದಿನ-ತರಂಗ-ಮುಗಿಯಲು, ತುಂಬಿ-ತಿಳಿವ-ಸಂಜೆಯು, ಬಾನು-ಎಲ್ಲ-ಎಲ್ಲೆಯೂ.........,

ಸಂದ್ಯಾ ರಾಗ ಹಾಡಲು-ಚೆಂದಮಾಮ-ಕೇಳಲು   
ಮಲೆಗಿರಿ-ಬೆಟ್ಟದ ದಿನದೊಳು-ಸಂಜೆ, ಹೊಂಬೆಳ-ಕಿರುಳಲು  ತಿಂಗಳ-ಬೆಳಕು!       
ಇಳಿಯುತ ಸಂಜೆ ಕವಿಯಲು ಕತ್ತಲು, ಕವಿಭಾ$ವಕು-ದಿಗಿಲು-ಬರಲು, ಹಿಟ್ಟು ಚೆಲ್ಲುತ ಬೆಳಕು.
ನೋಡವ$ನ$,ಬಂದ$ಅಂದ , ನಮ್ಮ ಮಾಮ-ಚೆಂದ, ಗೀ$$ಚುತ ಎರಡು-ಸಾಲು- ಅಂದ. || ೧ || 

ಗಗನ-ತಾರೆ-ಅರಸಲು ನಾದ-ಝರಿಯ ಜುಳು-ಜುಳು 
ಮಿನುಗು$ತಾರೆಗಳ-ಝಲಕು-ಮೋಡ$ದಲೆ, ನಗುತ-ಸಾಗಿಹ-ವನ$ಮಾಳಿ-ಅದರಲೆ.
ಅಂಬರ-ಚುಂಬಿತ ನೀಲನ-ಗಗನ, ಹಸಿರಿನ-ಸಿರಿ, ಸೊಬಗಿನ-ಸಹ್ಯಾದ್ರಿ,
ಪಸರಿಸಿ-ಚೆಲ್ಲಿದ ತಿಂಗಳ-ಬೆಳಕಲಿ, ಜುಳು-ಜುಳು ಹರಿವ ನಾದ$ಝರಿ. || ೨ ||

ಕಪ್ಪು-ಬಿಳಿಪು-ಕರಗಲು ಬೆಳ್ಳಿ-ಮೋಡ-ಅರಳಲು
ಕಪ್ಪದು-ಅಡರಲು ತೆಪ್ಪಗೆ-ದುಂಬಿ, ಮತ್ತಲಿ-ಆಲಿಸೆ ಚಿಟ್ಟೆ-ಚೀರಿ-ಪಿರಿ. 
ಕಪ್ಪು-ಬಿಳಿಪು ಮಧುಬನ-ಸೆಳೆತ, ಕಾಣದ$ಕನಸಲು ಮೌನದ$ಥಳಕು,
ಅರಸು-ಮಕ್ಕಳಿಗೂ ಸಿಕ್ಕದ-ಸೊಗಸು, ವರಕವಿ-ಕಾಣುವ ಸೃಷ್ಟಿಯ-ಸೊಬಗು || ೩ ||

(ಧಾಟಿ-ಪಾಟಿಯು-ಬೇಡ, ಶಬ್ದ-ಕುಣಿವ-ಚೆಂದ, ಕಂದನ-ಹಾಡು, ನೀ-ಮನದಣಿ-ಕೇಳು)

B.R. Bhate, Dt:25-05-2014