ನಮ್ಮೂ ರ ಕೇರಿ(ತಿಳವಳ್ಳಿ) ಯಲ್ಲಿ, ಶ್ರೀಯುತ ಕೃಷ್ಟರಾವ ಮತ್ತು ಶ್ರೀಮತಿ ಸಾವಿತ್ರಿಬಾಯಿ, ವಯೋವೃದ್ಧ ದಂಪತಿ, ಖಾಂಡೇಕರ ಮನೆತನದ, ಹಿರಿಯ ಜಮೀನು ಯಜಮಾನ ರಿದ್ದರು. ಅಜಾನುಬಾಹು, ಎತ್ತರ ದೇಹ, ಗಂಧ ಲೇಪಿತ ಹಣೆ, ಕೈಯಲ್ಲೊಂದು ಕೋಲು, ಥೇಟ್ ಕನ್ನಡಕ ಧರಿಸಿದ, ಗಾಂಧೀಜಿಯ ಅಪರಾವತಾರ, ಎನ್ನುವಂತಿದ್ದರು. ತೊಂಬತ್ತು ದಾಟಿದ ಅವರ, ನಿತ್ಯ ನಸುಕಿನ ಸುಪ್ರಭಾತ, ಅಭ್ಯಂಜನ, ದೇವಪೂಜೆ-ಪಾರಾಯಣ, ಹರಿಕಥೆ ಕಾಲ ಕ್ಷೇಪ, ಬರುಹೊಗು ಜನರ ಯೋಗ ಕ್ಷೇಮ, ಮನೆ ಉಸ್ತುವಾರಿ, ಸಾಯಂಕಾಲ ತನಕದ ರಿವಾಜು, ನಮ್ಮ ಊರಲ್ಲಿ ನೋಡುವ ಹಾಗಿತ್ತು. ಹಿರಿಯ ಮಗ, ಕೇಶವ ರಾಯರು, ಊರಲ್ಲಿಯ ಗೌಡ-ಶ್ಯಾನು ಭೋಗರ ಜ್ಯೊತೆ, ಕರಣೀಕ ರಾಗಿದ್ದರು, ಕಿರಿಯ ಭೀಮರಾಯ ಮಿಲ್ಟ್ರಿಯಲ್ಲಿ, ಉಳಿದಿಬ್ಬರು ಬೆಳಗಾಂ ಪುಸಾಳ್ಕರ ಕಂಪನಿ ಕೆಲಸಕ್ಕೆ, ದೂರ ಹೋಗಿದ್ದರು. ಉಳಿದ ೫-೬ ಮಕ್ಕಳ ಜ್ಯೊತೆ ಕೇಶವರಾಯರ ಧರ್ಮಪತ್ನಿ, ಅಂಬಕ್ಕ ಅವರ ಗದ್ದೆಮನೆ-ಕೊಟ್ಟಿಗೆ ಯಿಂದ ಊರಲ್ಲಿರುವ, ಸ್ವಂತ ಮನೆ ತನಕ, ಕೆಲಸ ಕುಂದಿಲ್ಲದಂತೆ, ನೋಡಿ ಕೊಳ್ಳುತ್ತಿದ್ದರು. ಸಮಾಜ ಸೇವೆಯಲ್ಲಿ, ಅವರ ಕುಟುಂಬವು ಸಹ, ಎತ್ತಿದ ಕೈ ಆಗಿತ್ತು. ಬೆಳಿಗ್ಗೆ ಗೋಮಾಳ ಸೇರಿದ ದನಕರುಗಳು, ಸಾಯಂಕಾಲ ಬರದಾಗ, ಕೃಷ್ಟರಾಯರು, ‘ಗಂಗೇ, ಗೌರಿ.., ಯಮುನಿ..,ಕರಿಯ...,ಭರಮ... ಎಂದು ಹೆಸರಿಡಿದು, ಎಮ್ಮೆ-ಹಸು-ಕರು ಗಳನ್ನು ಕೆರದಾಗ ಎಲ್ಲಿಲ್ಲದ ಹಸುಗಳು ಗೋಮಾಳದಿಂದ, ಕೊಟ್ಟಿಗೆಯ ತಮ್ಮಜಾಗಕ್ಕೆ, ಸೇರುವ ಶಿಸ್ತು, ಈಗ ನೋಡಲು ಸಿಗುವದಿಲ್ಲ. ಕೃಷ್ಟ ರಾಯರು ಮಧ್ಯಾನ್ಹ ಕಾಕ ವಾಯಸ (ಬಲಿ/ಪಿಂಡ) ವಿಟ್ಟಾಗ ಕಾಗೆಗಳು ತಿಂದು ಮುಗಿಸುತ್ತಿದ್ದಂತೆ ಮುಂದಿನ ಕಾರ್ಯಕ್ರಮ ಸಾಗುತ್ತಿದ್ದವು..... B.R. Bhate, Dharwad. Dt:26-04-2014
Saturday 26 April 2014
ನಮ್ಮೂ ರ ಕೇರಿಯಲಿ ಅರ್ಧ ಶತಕದ ಹಿಂದೆ ಪುಟ ತಿರುವಿದಾಗ.... ಗಂಗೇ, ಗೌರಿ, ಯಮುನಿ...
ನಮ್ಮೂ ರ ಕೇರಿ(ತಿಳವಳ್ಳಿ) ಯಲ್ಲಿ, ಶ್ರೀಯುತ ಕೃಷ್ಟರಾವ ಮತ್ತು ಶ್ರೀಮತಿ ಸಾವಿತ್ರಿಬಾಯಿ, ವಯೋವೃದ್ಧ ದಂಪತಿ, ಖಾಂಡೇಕರ ಮನೆತನದ, ಹಿರಿಯ ಜಮೀನು ಯಜಮಾನ ರಿದ್ದರು. ಅಜಾನುಬಾಹು, ಎತ್ತರ ದೇಹ, ಗಂಧ ಲೇಪಿತ ಹಣೆ, ಕೈಯಲ್ಲೊಂದು ಕೋಲು, ಥೇಟ್ ಕನ್ನಡಕ ಧರಿಸಿದ, ಗಾಂಧೀಜಿಯ ಅಪರಾವತಾರ, ಎನ್ನುವಂತಿದ್ದರು. ತೊಂಬತ್ತು ದಾಟಿದ ಅವರ, ನಿತ್ಯ ನಸುಕಿನ ಸುಪ್ರಭಾತ, ಅಭ್ಯಂಜನ, ದೇವಪೂಜೆ-ಪಾರಾಯಣ, ಹರಿಕಥೆ ಕಾಲ ಕ್ಷೇಪ, ಬರುಹೊಗು ಜನರ ಯೋಗ ಕ್ಷೇಮ, ಮನೆ ಉಸ್ತುವಾರಿ, ಸಾಯಂಕಾಲ ತನಕದ ರಿವಾಜು, ನಮ್ಮ ಊರಲ್ಲಿ ನೋಡುವ ಹಾಗಿತ್ತು. ಹಿರಿಯ ಮಗ, ಕೇಶವ ರಾಯರು, ಊರಲ್ಲಿಯ ಗೌಡ-ಶ್ಯಾನು ಭೋಗರ ಜ್ಯೊತೆ, ಕರಣೀಕ ರಾಗಿದ್ದರು, ಕಿರಿಯ ಭೀಮರಾಯ ಮಿಲ್ಟ್ರಿಯಲ್ಲಿ, ಉಳಿದಿಬ್ಬರು ಬೆಳಗಾಂ ಪುಸಾಳ್ಕರ ಕಂಪನಿ ಕೆಲಸಕ್ಕೆ, ದೂರ ಹೋಗಿದ್ದರು. ಉಳಿದ ೫-೬ ಮಕ್ಕಳ ಜ್ಯೊತೆ ಕೇಶವರಾಯರ ಧರ್ಮಪತ್ನಿ, ಅಂಬಕ್ಕ ಅವರ ಗದ್ದೆಮನೆ-ಕೊಟ್ಟಿಗೆ ಯಿಂದ ಊರಲ್ಲಿರುವ, ಸ್ವಂತ ಮನೆ ತನಕ, ಕೆಲಸ ಕುಂದಿಲ್ಲದಂತೆ, ನೋಡಿ ಕೊಳ್ಳುತ್ತಿದ್ದರು. ಸಮಾಜ ಸೇವೆಯಲ್ಲಿ, ಅವರ ಕುಟುಂಬವು ಸಹ, ಎತ್ತಿದ ಕೈ ಆಗಿತ್ತು. ಬೆಳಿಗ್ಗೆ ಗೋಮಾಳ ಸೇರಿದ ದನಕರುಗಳು, ಸಾಯಂಕಾಲ ಬರದಾಗ, ಕೃಷ್ಟರಾಯರು, ‘ಗಂಗೇ, ಗೌರಿ.., ಯಮುನಿ..,ಕರಿಯ...,ಭರಮ... ಎಂದು ಹೆಸರಿಡಿದು, ಎಮ್ಮೆ-ಹಸು-ಕರು ಗಳನ್ನು ಕೆರದಾಗ ಎಲ್ಲಿಲ್ಲದ ಹಸುಗಳು ಗೋಮಾಳದಿಂದ, ಕೊಟ್ಟಿಗೆಯ ತಮ್ಮಜಾಗಕ್ಕೆ, ಸೇರುವ ಶಿಸ್ತು, ಈಗ ನೋಡಲು ಸಿಗುವದಿಲ್ಲ. ಕೃಷ್ಟ ರಾಯರು ಮಧ್ಯಾನ್ಹ ಕಾಕ ವಾಯಸ (ಬಲಿ/ಪಿಂಡ) ವಿಟ್ಟಾಗ ಕಾಗೆಗಳು ತಿಂದು ಮುಗಿಸುತ್ತಿದ್ದಂತೆ ಮುಂದಿನ ಕಾರ್ಯಕ್ರಮ ಸಾಗುತ್ತಿದ್ದವು..... B.R. Bhate, Dharwad. Dt:26-04-2014
Subscribe to:
Post Comments (Atom)
No comments:
Post a Comment