Sunday 27 April 2014

೧೨ರ ಶತಕದ ತಿಳವಳ್ಳಿಯ, ಜಕ್ಕಣನ ಶಿಲ್ಪಕಲೆ ಶ್ರೀ ಶಾಂತೇಶ್ವರ ದೇವಾಲಯದಲ್ಲಿ ಕಾರ್ತೀಕ ಮಾಸದಲ್ಲಿ ನಡೆಯುವ ನಾ ಮರೆಯದ ಸಾರ್ವಜನಿಕ ಕಾರ್ತೀಕೋತ್ಸವ ವೈಭವ.



೧೨ರ ಶತಕದ ತಿಳವಳ್ಳಿಯ, ಜಕ್ಕಣನ ಶಿಲ್ಪಕಲೆ  ಶ್ರೀ ಶಾಂತೇಶ್ವರ ದೇವಾಲಯದಲ್ಲಿ ಕಾರ್ತೀಕ ಮಾಸದಲ್ಲಿ ನಡೆಯುವ ನಾ ಮರೆಯದ ಸಾರ್ವಜನಿಕ ಕಾರ್ತೀಕೋತ್ಸವ ವೈಭವ.
ನಂಬಿ ಕರೆದರೇ..... ಓ.... ಎನ್ನನೇ? ...ಶಿವನು..! ನಂಬ-ದಿದ್ದವಗೆ ಕೈ ಬಿಡುವನೇ ಅವನು, ಭಕ್ತ ವತ್ಸಲ ಬಿರುದುಳ್ಳವನು.
ಈ ನಂಬಿಕೆಗೆ,  ಸಂಕಟ ಬಂದಾಗ ವೆಂಕಟ ರಮಣ ಎಂಬಂತಾಗದೇ ದೇವರಿಗೆ ನಿತ್ಯೋಪಾಸನೆ ಅರ್ಚನೆ, ಅಷ್ಟೋತ್ತರ, ಬಿಲ್ವಾರ್ಚನೆ, ಅಭಿಷೇಕ, ಲಘು-ರುದ್ರ, ರುದ್ರಾಭಿಷೇಕ, ಅಕ್ಕಿ-ಪೂಜೆ, ಬುತ್ತಿ-ಪೂಜೆ,ಕಾರ್ತಿಕ ಮಹೋತ್ಸವ  ಮಹಾ-ಮಂಗಳಾರತಿ ಸೇವೆ ಗಳು ನಡೆಯುತ್ತಲೇ ಬಂದಿವೆ.
ದೇವಾಲಯದಲ್ಲಿ ಕಾರ್ತಿಕ ಮಾಸದ ಮೊದಲದಿನ ದೇವಸ್ಥಾನ ಸುತ್ತ ಮುತ್ತಲ ಆವರಣ ಶುಚಿ ಗೊಳಿಸುವದು,ಹೊರಗಡೆಗೆ ಧೂಳು ಬರದಂತೆ ನೀರಿನಿಂದ ಥಳಿ ಹೊಡೆಯುವದು, ದೇಗುಲ ದೊಳಗೆ ನೀರಿನಿಂದ ತೊಳೆದು ಚೆನ್ನಾಗಿ ಒರೆಸಿ ಎಲ್ಲರೂ ಕೂಡಲು ಅಣಿಗೊಳಿಸುವದು. ಅಂದು ಎಂದಿನಂತೆ ದೇವಸ್ಥಾನದ ಅರ್ಚಕರು ತ್ರಿಕಾಲ ಪೂಜೆ ಮಾಡುತ್ತಾರೆ. ಪಣತಿ ಗಳನ್ನು ತಂದು ದೇಗುಲದ ಆವರಣ ದೊಳಗೆ ಎಣ್ಣೆ-ಬತ್ತಿ ಹಾಕಿ ನಿರ್ದಿಷ್ಟ ಜಾಗೆಯಲ್ಲಿ ಇಡುವದು, ಅಲ್ಲದೇ  ಒಂದು ಎರಡು ಚಿಮಣಿ-ಡಬ್ಬದಷ್ಟು(೬-೮ ಹತ್ತಿಕಾಳು ಬಟ್ಟೆಯಲ್ಲಿ ಕಟ್ಟಿ ಮಾಡಿದ) ಗಂಟುಗಳನ್ನು ಶೇಂಗಾ ಎಣ್ಣೆ ಹಾಕಿ ನೆನೆಸೀ ಇಟ್ಟು ಅವುಗಳನ್ನು ದೇವಸ್ತಾನದ ಮೇಲೆಲ್ಲಾ ನಿರ್ದಿಷ್ಟ ಸ್ಥಳದಲ್ಲಿ ಇಡಲಾಗುತ್ತಿತ್ತು. ಈ ಎಲ್ಲ ಕೆಲಸಗಳನ್ನು ಮನೆಯ ಆಸುಪಾಸು ಜನರು ಸೇವಾ ಭಾವ ದಿಂದ ಮಾಡುತ್ತಾರೆ. ಇಷ್ಟ-ಮಿತ್ರ ಬಂಧುಗಳು, ಸಹಿತ, ಹಳ್ಳಿಯಲ್ಲಿನ ಜನರು ಎಲ್ಲರೂ ಬಂದು ಸೇರುತ್ತಾರೆ. ಸಂಭ್ರಮದಿಂದ ನಲಿಯುತ್ತಾರೆ.
ಇನ್ನು ದಿಪೋತ್ಸವದ ನಿಮಿತ್ಯಗರ್ಭಗುಡಿಯಲ್ಲಿ ವಿಶೇಷ ಅಲಂಕಾರ ಅರ್ಚನೆ ಪೂಜೆ, ಮುಗಿಸಿ, ದೇವರ ಮಂಗಳಾರತಿ ಹಚ್ಚುವ ವೇಳೆಗೆ ಸರಿಹೊಂದುವಂತೆ ತಯಾರಿ ಮಾಡಿರುತ್ತಾರೆ. ಸುಮಾರು ರಾತ್ರಿ ೭.೩೦ರ ವೇಳೆಗೆ ದೇವರ ನಂದಾ ದೀಪ ಬಿಟ್ಟು ಉಳಿದೆಲ್ಲ್ಲ ದಿಪಗಳನ್ನು ಬಂದು ಮಾಡಿ, ದೀಪ ದ ಅವಶ್ಯಕತೆ ಮತ್ತು ಬೆಳಕಿನ ಮಹತ್ವ, ಮಹಿಮೆ ಎಲ್ಲ ಜನಕ್ಕೆ ಅರ್ಥೈಸುತ್ತಾರೆ. ನಂತರ ಎಲ್ಲರೂ ಸೇರಿ ನಿಗದಿ ಪಡಿಸಿದ ಜನರು, ಭಕ್ತಿ ಮತ್ತು ಎಚ್ಚರ ದಿಂದ ದೇವಾಲಯದ ಆವರಣದ ತುಂಬಾ ಪಣತಿ ದೀಪ ಮತ್ತು ಸಧೃಕಡ ಯುವಕರು ದೇಗುಲ ಹತ್ತಿ ಮೇಲೆ ಇಟ್ಟ ಹತ್ತಿಕಾಳ-ಎಣ್ಣೆ ಗಂಟು ದೀಪ ಹಚ್ಹುತ್ತಾರೆ. ಈ ದಿಪೋತ್ಸವ  ದೀಪಗಳನ್ನು ವ್ಯವಸ್ಥಿತ ವಾಗಿ ಒಮ್ಮೆಲೇ ಬೆಳೆಗುವ ಪ್ರಕ್ರಿಯೆ ಪ್ರಮುಖ ವಾಗಿರುತ್ತದೆ. ಈ ಬೆಳೆಕಿಗೆ ಚ್ಯುತಿ ಬರದಂತೆ ಚಿಕ್ಕ ವಿದ್ಯುತ್ ದೀಪ ಹಚ್ಚುತ್ತಾರೆ. ಚಂದನ ಧೂಪ ಹೊಗೆಯಲ್ಲಿ ದೇವರ ಬೆಳಕು ಮಂದವಾಗಿ ಪ್ರಕಾಶಿಸುತ್ತದೆ. ಆಗ ಅರ್ಚಕರು ಮಂಗಲ ವಾದ್ಯಗಳೊಡನೆ ಮಂಗಳಾರತಿ ಮಾಡುತ್ತಾರೆ.
ಅಂದಿನ ವಿಶೇಷ ಹಮ್ಮಿಕೊಂಡ ಕಾರ್ಯಕ್ರಮಗಳು:
ಅಂದಿನ ಕಾರ್ಯಕ್ರಮಗಳು ಮಂಗಲಾಚರಣೆ ಯೊಂದಿಗೆ, ಅಷ್ಟಾಂಗ ಮಾರ್ಗ ಆಗಮ/ನಿಗಮ-ಉಪನಿಷತ್ ವೇದ-ಮಂತ್ರ ಪಠಣ ಪ್ರಕಾರ ಮಾಡುತ್ತಾರೆ.ಪ್ರತಿ ಕಾರ್ಯಕ್ರಮ ಗಳ ಘೋಷಣೆ ವೇದ ಮಂತ್ರ ಬಲ್ಲವರಿಂದ ಆಗುತ್ತದೆ. ನನಗೆ ತಿಳಿದ ಮಟ್ಟಿಗೆ ಸ್ವಸ್ತಿ ಹೀಗಿರುತ್ತದೆ. ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ ದೇವ-ದೇವೋತ್ತಮ ದೇವತಾ ಸರ್ವಾಭ್ಯಾಮ, ಋಷಿ-ಮುನಿ ಗಣಾನಾಮ್ , ಸರ್ವಾಯುಶಃ ಋಗ್ವೇದ ಸೇವಾ ಮಮಧಾರಯಾ. ಎನ್ನುತ್ತಿದ್ದಂತೆ ಬಲ್ಲವರು ಋಗ್ವೇದದ ಕೆಲ ಭಾಗ ಪಠಣ ಮಾಡುತ್ತಾರೆ. ಇದೇ ರೀತಿ ಸ್ವಸ್ತಿಯೊಂದಿಗೆ, ಸಾಮ ವೇದ, ಯಜುರ್ವೇದ, ಅಥರ್ವಣ ವೇದ ಪಠಣ ಮಾಡುವರು. ಸಂಗೀತ ಸೇವಾ, ನೃತ್ಯ/ನಾಟ್ಯಸೇವಾ, ಗಾಯನ-ಭಜನ ಸೇವಾ, ವೇಣುಪ್ರಿಯ,ವೀಣಾ ಪ್ರಿಯ, ವಾದನ ಪ್ರಿಯ, ಘುಮ್ಮಟ ಪ್ರಿಯ, ಘಟವಾದ್ಯ ಪ್ರಿಯ, ಡಮರು ವಾದ್ಯ ಪ್ರಿಯ, ಇತ್ಯಾದಿ ಗಳ ನಂತರ ಶಂಖನಾದ ಪ್ರಿಯ, ಘಂಟಾ ನಾದನಮ್ ಸಹಿತ ಸರ್ವ ವಾದ್ಯ ಪ್ರಿಯ ಸೇವಾ ಮಮಧಾರಯಾ, ಎಂಬ ಸೇವೆಯಲ್ಲಿ ಮಂಗಳಾರತಿ ಯೊಡನೆ ಕಾರ್ಯ ಕ್ರಮಗಳು ಸಂಪನ್ನ ವಾಗುತ್ತವೆ. ಎಲ್ಲಾ ದೀಪಗಳ ಸಂಭ್ರಮ ವಾದಂತೆ ಸುತ್ತುವರೆದ ಜನಪದವು ತುಪ್ಪದ ದೀಪ ಹಚ್ಚಿ ಆರತಿ ಬೆಳೆಗುತ್ತಾರೆ. ನಂತರ ವಿಶೇಷ ವಾಗಿ  ಆಮಂತ್ರಿಸಿದ ಹರಿದಾಸರಿಂದ ಆ ಪರಿಸರದಲ್ಲಿ ಹರಿಕಥೆ ಕೀರ್ತನೆ ಆರಂಭ ವಾಗುತ್ತದೆ. ಆಗ ಅಲ್ಲಿ ಅವಶ್ಯ ಪಣತಿ ದೀಪ ಗಳ ಪೂರೈಕೆ ಇಟ್ಟಿರುತ್ತಾರೆ.
ಮಂಗಲಾಚರಣೆ ಮುಕ್ತಾಯ ಮಂಗಳಾರತಿ ಯೊಂದಿಗೆ ಎಲ್ಲ ಕಾರ್ಯಕ್ರಮಗಳು ಪ್ರಸಾದ ವಿನಿಯೋಗ ದೊಂದಿಗೆ ಮುಕ್ತಾಯ ಹೊಂದುತ್ತವೆ. ಬಾಲ್ಯದ ಅಂದಿನ ಚಿಕ್ಕಂದಿನ ಕಾರ್ಯಕ್ರಮಗಳಲ್ಲಿ ಅಲ್ಪ ಸ್ವಲ್ಪ ಬದಲಾವಣೆ ಗಳಿರಬಹುದು. ಬದಲಾವಣೆ ಪ್ರಕೃತಿಯ ನಿಯಮ ಅಂತೆ ದಿನ ಕಳೆದ ಪ್ರಕುರ್ತಿಗೆ ಇಂದು ಸಂದ್ಯಕಾಲ ಆದರೇನಂತೆ, ಉದಯಕಾಲದ ಉದಯ ರಾಗದ ರವಿಗೆ ಇಳಿವಂತೆ ಸಂಧ್ಯಾರಾಗವೂ ಹಾಡಲೇ ಬೇಕಲ್ಲ ಏನೇ ಆದರೂ ಸಮರಸವೇ ಜೀವನದ ಈ ರಸ ನಿಮಿಷಗಳು ಅರಿವಿರುವ ತನಕ ನಿತ್ಯ ವಿನೂತನಗಳ ನಡುವೆ ಬರುವ ಎಂದೂ ಮರೆಯದ ಆ ದಿನಗಳು ಈ ಜಗವೇ  ವಿಸ್ಮಯ!!.
B.R. Bhate, Dt:27 -04-2014

No comments:

Post a Comment