Sunday 27 April 2014

ಬೇಸಿಗೆ ಮಳೆ ಚಳಿ - ತ್ರಿಕಾಲ, ಠಣ-ಠಣ-ಠಣ ಜೈ ಗೋಪಾಲ !!!



ಬೇಸಿಗೆ ಮಳೆ ಚಳಿ - ತ್ರಿಕಾಲ, ಠಣ-ಠಣ-ಠಣ ಜೈ ಗೋಪಾಲ !!!
ಬೇಸಿಗೆ ಮಳೆ ಚಳಿ - ತ್ರಿಕಾಲ, ಕೈಕೊಟ್ಟರೆ ಜಗದಿನೋಡು, ಠಣ-ಠಣ-ಠಣ ಜೈ ಗೋಪಾಲ
ಕೃಷಿಕ ನೇಗಿಲ ಯೋಗಿ
ಬೆಳೆ ಬೆಳೆಯದಿರೆ ಏನು, ಪಣತ ತುಂಬುವ ಕಣಜ, ಕಳೆಯುವವು ಗಳಿಸುವವೇ , ಜಳ ಜಳ ವಾದಾಗ
ಕೃಷಿಗೆ ಕೈ ಕೊಟ್ಟಾಗ, ದುಡಿದರಿಲ್ಲಾ ಗೆಲುವು. ಹಾವು-ಏಣಿಯ ಆಟ..., ಆಟ ಆಡುವ ಮಾತು,
ಕೈ ಕೆಸರು ಬಾಯಿ ಮೊಸರು, ಹೊಕ್ಕು ಇಳಿದವನೆಂದ, ಎದೆ ತನಕ ಧೂಳು ಕೆಸರು. || ೧ ||
ಕೆಟ್ಟು ಪಟ್ಟಣ ಸೇರು ಉದ್ಯೋಗ ವರಸು
ಕಲಿ-ಕಾಲ ಕಲಿಕೆ-ಯೊಳು ಮುಗ್ಗರಿಸಿ ಬಿದ್ದಾಗ, ಎದ್ದರೇನು? ಬಿದ್ದು ಇಲ್ಲ ಹಾಳು ಉಸಿರು.
ದಿನವು ಹೋಗುವವು, ಇಂದಿನ-ದಿನ ನಾಳೆ, ಹೇಳುವರು ವೇದಾಂತ ಉದ್ಯೋಗ ವರಸು || ೨ ||
ಏನೆಲ್ಲಾ ಕೆಲಸ ಉರಿ-ಸೌದೆಗಾಗಿ
ಕೈಚೀಲ ಹಿಡಕೊಂಡು, ಗೋಮಾಳ ತಿರುಗಿದ್ದು, ಹೆಕ್ಕುತ್ತ, ಕಾಕುಳ್ಳು,(ಸೌದೆ)ಚೀಲದಲಿ ತುಂಬುತ್ತ
ಒಂದೆಡೆಗೆ, ಗುಪ್ಪಿ ಚೀಲ ರಾಶಿ ಹಾಕಿದ್ದು, ಅಂತೆ ಹೊತ್ತು ಗೋಣೀ-ಚೀಲ ಸಾಗಿದ್ದು ಮನೆಗಯತ್ತ
ಕಾಳಿಲ್ಲದಿರೇ ಏನು ಹೆಕ್ಕು ತೆನೆಗಾಗಿ
ಕೈಚೀಲ ಹಿಡಕೊಂಡು, ಹಕ್ಕಲು-ಗದ್ದೆ ತಿರುಗಿದ್ದು , ಹೆಕ್ಕುತ್ತಾರಿ$ಸುತ್ತ, ತೆನೆ-ಭತ್ತ, ಚೀಲದಲಿ
ಬಿದಿರು ಅಕ್ಕಿ ಬಂತು, ಬರಕೆ ಪರಿಹಾರ, ಪಣತ ತುಂಬುವ ಕಣಜ  ಜಳ- ಜಳ ವಾದಾಗ. || ೩ ||
B.R. Bhate, Dharwad. Dt:28-04-2014

No comments:

Post a Comment