ಶುಭೋದಯದ
ಇಂದು ಬೆಳಗು ಹಾಡುತಿದೆ "ಈ(e-ಕನ್ನಡ)"!!!
"ಏಳೋ
ಗೋವಿಂದಾ, ಏಳೋ
ಗೋಪಾಲಾ!" ಅಂತ
ಅಪ್ಪನ ಕಂಠ ಬಿರೀ-ತಿತ್ತಂದ್ರ,
ಖಂಡಿತ-ಬೆಳಕಾಗಿರ್ತದ..
ಅಂತ ಅನ್ನೋದರ
ವಳಗ 'ಎದ್ದು
ನೋಡಿದ್ರ', ಮನ್ಯಾಗ-ಇನ್ನೂ-ಕತ್ತಲಿ
ಬೆಳಕ-ಹೆಂಗ-ಕಾಣಬೇಕು,
ಮತ್ತ
ಮುಸುಕು-ಹಾಕೊದ್ರಾಗ;
ದೆವ್ವನ-ಕೇರಿ-ಮುಲ್ಲಾನ
ಮೈಕಿನ-ಧ್ವನಿ,
"ಅಲ್ಲಾ ಹೋ
ಅಕ್ಬರ್" ಅನ್ನುವದಕ್ಕೂ,
ಛಪ್ಪರ-ಬಂದ್
ಬಾವಾ-ಸಾಬನ
ಕೋಳಿ-ಹುಂಜ
ಗಳು, 'ಕೊಕ್ಕ್-ಕೋ$ಕೋ'...
ಆಕಾಶವಾಣಿ-ಆಗೋದ್ರಾಗ,
ತುರಬೀಗುಡ್ಡ-ಮೂಡೀ-ಸ್ವಾಮಿಗಳ
ಮಠದ 'ಝಾಗಟೇ-ಸದ್ದು',
ಕ್ವಾಟಿ
'ದತ್ತಾತ್ರೇಯ-ಗುಡಿ'
ದಿಂದ 'ಶಂಖನಾದ'
ಕೇಳಿಸ್ತು
ಅಂದ್ರ; ಕಕ್ಕಡಾರತೀಗೇ
ಮಬ್ಬು-ಕತ್ತಲು
ಸರಿದಿರೋದು ಗ್ಯಾರಂಟೀ.
ಅನ್ನೋದ್ರಾಗ
ನಿಲ್ಲದ-ಮುಲ್ಲಾನ-ಧನ್ಯಾಗ
ಓಣ್ಯಾಗಿನ-ನಾಯಿ
ಓ-ಎಂದು-ಊಳಿಡುವದು
ಸಾಮಾನ್ಯ. ಗೌಳಿ-ಬಸ್ಯಾನ
ಆಕಳು ಗಳು'ಅಂಬಾ'
ಎನ್ನುವದಕ್ಕೂ;
ಹಿತ್ತಳದಾಗಿನ
ಬೆಣ್ಣಿ-ಸಂಗಪ್ಪನ
ಎಮ್ಮೆ,'ಆಂಯ್'
... ನಿಲ್ಸೋದ್ರಾಗ;
ಕುರುಬರ-ಬೀರಪ್ಪನ
ದೊಡ್ದೀಂದ ಕುರಿಗಳ 'ಬ್ಯಾ$ಬ್ಯಾ'...
ಇವೆಲ್ಲಾ-ನಮ್ಮೂರಾಗಿನ
'ಆರ್ಕೇಸ್ಟ್ರಾ'
ಆರಂಭ-ಆಗೋದ್ರಾಗ;
ಅಗಸರ
ಅಂದಾನೆಪ್ಪನ-ಕತ್ತೆಗೇ
'ಮಾಮೂಲಿ-ಶಿವಪ್ಪ'
ಎದ್ದಾನೋ?
ಇಲ್ಲಾ--ನೋಡಾಕ
'ಹಜರತ್'
ಇಮಾಮ ನನ್ನೇ
ಪ್ರಶ್ನಿಸುವಂತೆ "ಹಜರತ್
ಹಾಯ್$ ಕೀ-ನೈಕೀ?"...
ಅನ್ನೋದ್ರಾಗ
ಶಿವಪ್ಪನ- 'ಡೊಣ್ಣೆ-ಏಟು',
ಸಿಕ್ಕತೋ-ಏನೋ!
ಪಾಪ. '
ಹೀ$$ ಹೀ'
ಎನ್ನುವ
ಕುಡ್-ಖಾದೀರ
ನ ಕುದರಿ ಸದ್ದು ಇಷ್ಟೆಲ್ಲಾ
'ಹಾಜ್ರೀ'
ಕೊಟ್ಟಾಗ
ನಸುಕೇನು, ಬೆಳ್ಳನ
ಬೆಳಗೇ!
ಎದ್ದು
ಹಾಸಿಗೆ-ಹಚ್ಚಡ
ಮಡಚಿ; ಬಚ್ಚಲಿಗೆ
ಹೋಗಿ ಹಲ್ಲುಜ್ಜಿ ಮುಖತೊಳಕೊಂಡು;
ಫ್ರೆಶ್-ಆಗೀ,
ದೇವರಿಗೆ
ಕೈಮುಗಿತಿದ್ಧಂಗ: 'ಸಣ್ಣಕ್ಕ'
"ಎಷ್ಟೊತ್ತಪಾ!
ಏಳ್ಲಿಕ್ಕೆ!!
ಮಾವಷಿ ಕರೆದದ್ದು
ಕೇಳಿಸ್-ಲಿಲ್ಲೇನು?"
ಬಾ-ಎಂದು
ಮಣೆ ಹಾಕೀ; ಎದುರಿಗೆ
ಬಿಸಿ-ಬಿಸಿ
ಕಾಫೀ-ಕಪ್ಪು
ಇಟ್ಟಳು. "ಇಲ್ಲ್
ಸಣ್ಣಕ್ಕಾ, ರಾತ್ರೀ
ಕೆಲ್ಸ್ ಮುಗ್ಸಿ ಬರೋದಕ್ಕ ತಡಾ-ಆಗೀ
ಮಲಗಿದ್ದೆ". "ಈಗ-ಲಗೂನ-ಹೋಗಬೇಕಾಗೀದ".
ಅಂತ ಒಂದ್ ಸಣ್ಣ
ಸುಳ್ಳು ಹೇಳಿ ಕಾಫೀ ಕುದೀತಿದ್ಧಂಗ
ಆಕಾಶವಾಣಿ "ಬೆಳ್ಳನ
ಬೆಳಗಾ ಆಯಿತು ... " ಕೇಳ್ತಿದ್ದ್ಂಘ
ಪಡಸಾಲ್ಯಾಗ ಆರಾಮ ಖುರ್ಚಿ ಮ್ಯಾಗ
ಕುಂತೆ.
ಹೊರಗ
ಬಾಗಿಲದಾಗ ಸೂರ್ಯನ ಕಿರಣ ಪಸರಿಸಿತ್ತು.
ಕೈಯಾಗ ವರ್ತಮಾನ
ಪತ್ರ ಹಿಡಿತಿದ್ದ್ಂಘ ರಾರಾಜಿಸಿದ್ದು
ಶುಭೋದಯ "ಕನ್ನಡ
ರಾಜ್ಯದ ಸಮಸ್ತ ಜನತೆಗೆ ಕರ್ನಾಟಕ
ರಾಜ್ಯೋತ್ಸವದ ಶುಭಾಶಯಗಳು "
ಇತ್ತ
ತಂಗಿ, ಹಾರ್ಮೊನಿಮ್
ಹಿಡಿದು; ಸುಪ್ರಭಾತದ
ಪದ " ಮೋದದಿ-ನಗಿಸುತಾ
ಮಾತೆಯ-ಅರುಣಾ
" ಹಾಡುತ್ತಿದ್ದಂತೆ
ತಮ್ಮನ 'ಪ್ರಭಾತ್
ಭೇರಿ ತಾಲಿಮ್', "ತಾಯೇ
ಬಾರೇ ಮೊಗವ ತೋರೆ ಕನ್ನಡಿಗರ
ಮಾತೆಯೇ ".
ಅಂದು
ಧಾರವಾಡದ ಹುಯಿಲಗೋಳ ನಾರಾಯಣ
ರಾಯರು " ಉದಯ
ವಾಗಲಿ ನಮ್ಮ ಚೆಲುವ ಕನ್ನಡ ನಾಡು
" ಗಾಗಿ
ಗರ್ಜಿಸಿದ್ದರು.
ಇಂದು
ಬದುಕಾಗಲೀ ಕನ್ನಡ ಎನ್ನುವ ಅನುಷ್ಠಾನ
ಚಿಂತನೆ ನಡೆದಿದೆ. ನಾಡು-ಕನ್ನಡ
ನುಡಿಯು-ಕನ್ನಡ
ಮನೆ-ಮನ-ಜನ
ದನಿಯು ಕೂಡ ಹಾಡುತಿದೆ "ಈ(e-ಕನ್ನಡ)"!!!
B.R. Bhate, at
Slough-UK. Dt:01-11-2014
No comments:
Post a Comment