ಆಸೆ ಚಿಗುರಿನ ಕುಸುಮ ಗಗನ ತುಂಬಿದ ಕನಸು.
ತಗಲ ಲಾರದ ವಿದ್ಯೆ, ಬಾಳ ಬದುಕಿಗೆ ಹೊಸೆದು;
ಹೇಳ ತಿರದ ಕಥೆಯು ದುಡಿಯಲಾಗದ ಮಾಣಿ;
ಹರಿವ ನದಿಯಲಿ ಹೊರಟ ಹುಟ್ಟಿಲ್ಲದ ದೋಣಿ,(೧)
ಮುಂದೆ ಕಂದರದಲ್ಲಿ ಭೋರೆಂದು ಹಾರಿ,
ಜೀವನದ ಪಡಿ-ಪಾಟ ಸಾಕು ಮುರಾರಿ.
ಕಂಗೆದಿಸಿದಾ ಬಾಳು ಕೂಳಿಗೂ ಗೋಳು.
ಬೇಕು-ಬೇಡದ ಕೆಲಸ ಒತ್ತಾಯದ ದುಡಿಮೆ.
ಮೊಣ ಕೈಗೆ ಹಚ್ಚಿದ ಬೆಲ್ಲದಾಸೆ. (೨)
ಹೇಳುವರು ಹೇಳಿದರು ನೂರೆಂಟು ಉಪದೇಶ;
ಸಿಕ್ಕ ಕೆಲಸವ ಮಾಡು ಮುಂದೆ ಒಳಿತಿಗೆ ನೋಡು;
ಇಷ್ಟ ತಿಷ್ಟ ಬಿಟ್ಟು ಹಾಸಿಗೆ-ಯಷ್ಟು ಕಾಲು-ಚಾಚು;
ಮುಂದೆ ಚೆನ್ನಾಗುವದು ಎಂದೆಲ್ಲ ಪ್ರೀಚು.(೩)
ದಿನಕೊಂದು ಕೆಲಸ,ಅದು ಮುಂದೆ ಇದು ಮುಂದೆ.
ಓದು ಮುಗಿದರೆ ಚೆನ್ನ ಕೆಲಸ ಕೊಡುವರು ಅಂದೇ.
ಛಲ ಬಿಡ ತ್ರಿವಿಕ್ರಮನ ಪರಿಯರ್ಧ; ಏನಾದರೂ ಸರಿಯೇ;
ಮುಗಿಸ ಹೋದರು ಮಾಮು ಬಿ.ಕಾಮು. ಅರ್ಧಮರ್ಧ.(೪)
ದಿನಕೊಂದು ಕೆಲಸ,ಅದು ಮುಂದೆ ಇದು ಮುಂದೆ.
ಓದು ಮುಗಿದರೆ ಚೆನ್ನ ಕೆಲಸ ಕೊಡುವರು ಅಂದೇ.
ಛಲ ಬಿಡ ತ್ರಿವಿಕ್ರಮನ ಪರಿಯರ್ಧ; ಏನಾದರೂ ಸರಿಯೇ;
ಮುಗಿಸ ಹೋದರು ಮಾಮು ಬಿ.ಕಾಮು. ಅರ್ಧಮರ್ಧ.(೪)
ಅಂದವರು ಅಂದಾರು ಬಿಟ್ಟಾರು; ಏನೆಲ್ಲ.
ಕನಸುಗಾರಗೆ ಮಾತ್ರ ಬರಿ ಛತ್ರಿ ಎಲ್ಲ.
ಬದುಕು ದಿನ ದಿನ ಕೆಲಸ, ಕೊಡುವ ಕಾಸಿನ ಮುಂದೆ;
ದೂರ ತಿರದ ಪಯಣ ಒಣಗಿದರು ದೇಹ ಸಹನೆ ಒಂದೇ!! (೫)
ಏನಾದರೂ ಸರಿಯೇ ಚಿಕ್ಕಂದಿನಾ ಬಾಳು;ಹಾಲು -ಜೀನು;
ಚೊಕ್ಕ ಕಲಿಸದೆ ವಿದ್ಯೆ; ಬಾಳವನ ಹಾಳು.
ಇಹ ಪರದ ಈ ಗತಿಗೆ ನೀ ಬೀಜ ಬಾಳು;
ಇದನರಿಸ ದವನ ಜೀವನ ವೆಲ್ಲ ಗೋಳು.(೬)
ಒಪ್ಪು ತಪ್ಪೋಲೆಯ ಈ ನೆನಪು ಸುರಳೀ,
ಎದ್ದು ನೋಡಲು ನನ್ನ; ಕಣ್ಣು ಮಂಜು ಮುಸುಕಿ;
ತಿಲಿಸುತಿದೆ ಚಿನಕುರಳಿ ಎಲ್ಲ ಹೊರ-ಮರಳಿ.(೭)
ಕಲಿತ ವಿದ್ದ್ಯೆಗೆ ತಕ್ಕ ಉದ್ಯೋಗ ವರೆಸಿ;
ಕೆಲಸವಾಗದೇ ಬಿದ್ದೆ ಮೀಸಲಾತಿಗಳ ಮದ್ಧ್ಯೆ.
ದಾಟುವರು ದಾಟಿದರು ನಾ ಮುಂದು,ತಾ ಮುಂದು;
ದುಡ್ಡು ತೊಳ್ಬಲದಲ್ಲಿ. ಕುಣಿತಿದೆ ಝಣ ಝಣ;
ಕುರುಡು ಕಾಂಚಾಣ.(೮)
ಕುಳಿತವರು ಕುಳಿತಲ್ಲೇ, ಕಳಕೊಂಡು ಹಿಂಡು;
ದಾರಿ ತಾಪ್ಪಿತು ಅಲ್ಲೇ; ನೋಡು ನಿನ್ನ ಬದುಕು.
ಒಂದು ಕಣ್ಣಿಗೆ ಬಣ್ಣ ಇನ್ನೊಂದಕೆ ಸುಣ್ಣ;
ಸಾದ್ಧ್ಯ ವಾಗದ ಬದಕು,ತಡಕುತ್ತ ಮಣ್ಣು.(೯)
ಕಿತ್ತು ತಿಂದರು ಭೂಮಿ ಉಳುವಾತ ವಡವಿ;
ಹಾರುವನು ಹಾರಿದನು ಹಗಲು ಭಾವಿ.
ಏನು ಜೀವನ ದರ್ಥ ಉಪದೇಶ ಬೇಡ.
ಮುಳುವಾಗದಿರಿ ಇಂಥ ಹಾಳು ಭಾವಿ.(೧೦)
ಏನಾದರೂ ಸರಿಯೇ ಚಿಕ್ಕಂದಿನಾ ಬಾಳು;ಹಾಲು -ಜೀನು;
ಚೊಕ್ಕ ಕಲಿಸದೆ ವಿದ್ಯೆ; ಬಾಳವನ ಹಾಳು.
ಇಹ ಪರದ ಈ ಗತಿಗೆ ನೀ ಬೀಜ ಬಾಳು;
ಇದನರಿಸ ದವನ ಜೀವನ ವೆಲ್ಲ ಗೋಳು.(೬)
ಒಪ್ಪು ತಪ್ಪೋಲೆಯ ಈ ನೆನಪು ಸುರಳೀ,
ಎದ್ದು ನೋಡಲು ನನ್ನ; ಕಣ್ಣು ಮಂಜು ಮುಸುಕಿ;
ತಿಲಿಸುತಿದೆ ಚಿನಕುರಳಿ ಎಲ್ಲ ಹೊರ-ಮರಳಿ.(೭)
ಕಲಿತ ವಿದ್ದ್ಯೆಗೆ ತಕ್ಕ ಉದ್ಯೋಗ ವರೆಸಿ;
ಕೆಲಸವಾಗದೇ ಬಿದ್ದೆ ಮೀಸಲಾತಿಗಳ ಮದ್ಧ್ಯೆ.
ದಾಟುವರು ದಾಟಿದರು ನಾ ಮುಂದು,ತಾ ಮುಂದು;
ದುಡ್ಡು ತೊಳ್ಬಲದಲ್ಲಿ. ಕುಣಿತಿದೆ ಝಣ ಝಣ;
ಕುರುಡು ಕಾಂಚಾಣ.(೮)
ಕುಳಿತವರು ಕುಳಿತಲ್ಲೇ, ಕಳಕೊಂಡು ಹಿಂಡು;
ದಾರಿ ತಾಪ್ಪಿತು ಅಲ್ಲೇ; ನೋಡು ನಿನ್ನ ಬದುಕು.
ಒಂದು ಕಣ್ಣಿಗೆ ಬಣ್ಣ ಇನ್ನೊಂದಕೆ ಸುಣ್ಣ;
ಸಾದ್ಧ್ಯ ವಾಗದ ಬದಕು,ತಡಕುತ್ತ ಮಣ್ಣು.(೯)
ಕಿತ್ತು ತಿಂದರು ಭೂಮಿ ಉಳುವಾತ ವಡವಿ;
ಹಾರುವನು ಹಾರಿದನು ಹಗಲು ಭಾವಿ.
ಏನು ಜೀವನ ದರ್ಥ ಉಪದೇಶ ಬೇಡ.
ಮುಳುವಾಗದಿರಿ ಇಂಥ ಹಾಳು ಭಾವಿ.(೧೦)
No comments:
Post a Comment