Tuesday 27 March 2012

ಭರ್ಜರಿ ಹೊಳ್ಳರ ತಾಳ-ಮದ್ದಳೆ

ಬಾಯಿಗೆ ಚಪಲ ನಾಲಿಗೆ ನುಡಿಯಲು;ಹೊರಟವು ರಾಗದಾ ಭಾವಗಳು.
ಏನು ತಿಳಿಯದೆ ತಲೆಯದು ಹಾಕಲು; ಬೆರಳು ಬಡಿದವು ಥೆಕ್ಕೆಗಳು.
ಸುಗಮ ಸುಸ್ವರಕೆ ಪಿಯಾನದು ಸಿಗಲು. ತಾಳವ ತಟ್ಟಿದ ಐತಾಳ.
ಸಾಥ ಕುಟ್ಟಿದನು ತಬಲಾಜಿ.
ರಾಗ ತಾಳ ಸಮ್ಮಿಲನ ವಾಗಲು;ದಾಸಯ್ಯ ಮೀಟಿದ ತಂಬೂರೀ.
ವೈಣಿಕ ವೀಣೆ ನುಡಿಸಲು,ಏಕ ತಾರಿಯ ನಾದ ಹೂಮ್ಮಲು;
ಹಾಕಲು ಹೆಜ್ಜೆ; ಕುಣಿಯಿತು ಗೆಜ್ಜೆ, ಭರತನಾಟ್ಯ ಕದು ಮೊದಲ ಹೆಜ್ಜೆ.
ತಾಳವ ತಟ್ಟಲು,ಬಡಿಯಲು ಮದ್ದಳೆ; ಭರ್ಜರಿ ಹೊಳ್ಳರ ತಾಳ-ಮದ್ದಳೆ.
ಮೃದಂಗ ತದಗಿಣ್ ತೋಮ್;ಭಜಗೋವಿಂದಮ್ 

Monday 26 March 2012

ನಗು ನಗುತ ದಿನ ಸಾಗೋಣ


ಕಂದನ ಬಾಳಿನ ಕನಸು; ಸವಿ ಮಧು ಜೇನಿನ ಆ ಸೊಗಸು.
ಉದಯ ರಾಗದ ಈ ಹರೆಯ; ತೇಲಲಿ ಅನುರಾಗದ ಹೊಳೆಯ.
ಸಾಗುತ ಅಮರ ಮಧು ಪ್ರೇಮ; ಈಜೀವನ ಸಂಧ್ಯಾ ರಾಗ.
ನಗು ನಗುತ ದಿನ ಸಾಗೋಣ; ನಗುವಿನ ಜೊತೆ ಜೀವ ಸವಿಸೋಣ.
ಕಣ್ಮಣಿ ನೆನೆದ ಆ ಕನಸು; ಸವಿ ಮಧು ಜೇನಿನ ಆ ಸೊಗಸು.
ಉದಯ ರಾಗದ ಈ ಹರೆಯ; ತೇಲಲಿ ಅನುರಾಗದ ಹೊಳೆಯ.

ಜಗವಿದು ಸುಂದರ ತಾಣ ಬದುಕು ಬಂಗಾರದ ಪ್ರಾಣ.
ಅನುರಾಗದ ಈ ಸುಂದರ ಪಯಣ;ನಮದಾಗಲಿ ಅಮರ ಮಧು ಪ್ರೇಮ.

ಗತವೈಭವ ನಿನ್ನೆ ತನಕ; ಸವಿಯೋ ದಿನ ಸುಖ ಆತನಕ.
ನಗುವಲಿ ಜೀವ ಕಳಿಯೋಣ; ಸುಖದಲಿ ಜೀವನುಭವಿಸೋಣ.
ನಲಿಯುತ ಸುಖ ದುಃಖದ ಮುಂದೆ; ಇಟ್ಟಡಿ ಬಿಡೆ ಸಾಗುವ ಮುಂದೆ.
ಏನಿರಲಿ ಬಿಡೇ ಇರದಿರಲಿ; ಸರಿ ಸಾಗಲಿ ನಮ ಜಟಕಾಬಂಡಿ.
ನಮ ನಿಧಿ ಸಾಹೇಬನ ನಿಧಿ ಬಂಡಿ.    


ಅದೇ ಹಾಡು ಅದೇ ರಾಗ, ತಿರುಚಲು ಹೋದರು ಬರದು.


ಅದೇ ಹಾಡು ಅದೇ ರಾಗ, ತಿರುಚಲು ಹೋದರು ಬರದು.
ಅಭಿರುಚಿ ಶಿಸ್ತಿನ ಆ ಓದು;ಆಟ ಪಾಠದಲಿ ತಾ ಮುಂದು.
ಒಲವಿನ ಕಥೆಯ ಬರೆಯುವ ಮೊದಲು;ಗೆಲುವಿನ ಗುರಿಯದು ಎಂದೆಂದೂ ಓಹೋ;
ಅದೇ ಹಾಡು ಅದೇ ರಾಗ, ತಿರುಚಲು ಹೋದರು ಬರದು.

ಅನುರಾಗದ ಈ ಸುಂದರ ಪಯಣ ಆಗಲಿ ಅಮರ ಮಧು ಪ್ರೇಮ;
ಸೋಲು ಗೆಲುವು ಗಳ ಜೋದಾಟ;ತಪ್ಪದು ಜೀವಕೆ ಹೋರಾಟ.
ಸೋಲಿರಲಿ ಗೆಲುವೇ ಬರಲಿ;ಆ ಗಂಡೆದೆಯು ನಮಗಿರಲಿ.
ಸೋಲು ಗೆಲುವಿನ ಸೋಪಾನ ; ಗೆಲುವಾಗಲಿ ನಿನಗೆ ಜೋಪಾನ.
ಅದೇ ಹಾಡು ಅದೇ ರಾಗ, ತಿರುಚಲು ಹೋದರು ಬರದು.


ವಿಜಯ ವಿಟ್ಠಲನ ಕಲ್ಲಿನ ತೇರು; ಎಳೆಯಲು ಆಗಲಿ ಈ ಜೋರು.
ಹಂಪೆಯು ಕೊಂಪೆ ಹಳೆಕೋಟೆ; ಆಗಲಿ ಪ್ರೇರಣೆ ಹೊಸಕೋಟೆ. 
ಅದೇ ಹಾಡು ಅದೇ ರಾಗ, ತಿರುಚಲು ಹೋದರು ಬರದು.

  

Sunday 25 March 2012

ಬಿದಿಗೆ ಚಂದಿರ ಆದ ಹುಣ್ಣಿಮೆಯ ಚಂದಿರ

ಬಯಸಿ ಬಂದ ಆಸರೆಗೆ ಬಿದಿಗೆ ಚಂದ್ರ. ಓಹೋ ಬೀದಿಗೆ ಚಂದ್ರ.
ಬಂದಾನೋ ಚಂದ್ರಾಮ ಹುಣ್ಣಿಮೆ ರಾತ್ರಿ.ಓಹೋ ಬಿದಿಗೆ ಚಂದ್ರ.
ಬಿದಿಗೆ ಚಂದ್ರ ಬೆಳೆದಂತೆ ಅಷ್ಟಮಿ ರಾತ್ರಿ;ನವಮಿ ಕಳೆದು ನಾಕು ಇಂದು ಹುಣ್ಣಿಮೆ ರಾತ್ರಿ.
ನಾನು ನಿನ್ನ ಜೋಡಿ ನೀನು ನನ್ನ ಜೋಡಿ, ಆ ಇಬ್ಬರೂ ಎಳೆವಾ ಈ ಜೀವನ ಗಾಡಿ.
ಸಖೀ ನೀನು ಎಲ್ಲೇ, ಸಖಾ ನಾನು ಅಲ್ಲೇ; ಆ ಇಬ್ಬರೂ ಎಳೆವಾ ಈ ಜೀವನ ಗಾಡಿ.
ನೀ ನಗು ನಾ ನಗು ಈ ನಗುವಿನಲ್ಲೇ,ದಿನ ದಿನ ಕಳೆದರೂ ಬರ್ತಾವಲ್ಲೇ.ಈ ನಗುವಿನಲ್ಲೇ.
ಕಣ್ಣು ಮಿಟುಕಿ ಮಾಯವಾದ, ಬೀದಿಗೆ ಚಂದಿರ; ಭ್ರಮೆ ಹುಣ್ಣಿಮೆ ರಾತ್ರಿ.
ಬಿದಿಗೆ ಚಂದ್ರ ಮಾತಿನಲ್ಲಿ ನವಮಿ ಚಂದಿರ; ಮುಗಿಯದಿರಲಿ ನನ್ನ ನಿನ್ನ ಸವಿ ಸವಿ ರಾತ್ರಿ;ಓಹೋ ಬಿದಿಗೆ ಚಂದಿರ.  
ಆಹಾ ಥೈಯ್ಯಾ-ತಕ್ಕಾ ,ಹಾಕು ಹೆಜ್ಜೆ ಹಾಕು;ಹೆಜ್ಜೆಯಲ್ಲಿ ಹೆಜ್ಜೆ ಕಾಲ್ಗೆಜ್ಜೆ ಕುಣಿಯಿತು;
ಕೊಲಿಗೊಂದು ಕೋಲು ಬಡೆ ಕೋಲಾಟ ವಾಯಿತು;
ಅಲ್ಲಿ ತಾಳಾ ಇಲ್ಲಾ ತಂಬೂರೀ ಇಲ್ಲ,ಮೃದಂಗ ವಂತೂ ಇಲ್ಲೇ ಇಲ್ಲಾ;
ಸಾರುತ್ತಾ ಸಾಗಿದಾ ರಾಧೇ ಮಾಧವಾ;ನಡೆಯಲೀಗ ಅಮರ ಪ್ರೇಮ ಮಧುರ ಸಂಗಮ.

ಬಂದಾನೋ ಚಂದ್ರಾಮ ಹುಣ್ಣಿಮೆ ರಾತ್ರಿ.ಓಹೋ ಬಿದಿಗೆ ಚಂದ್ರ.
ನಡೆಯಲೀಗ ಅಮರ ಪ್ರೇಮ ಮಧುರ ಸಂಗಮ.

ಈ ಆಸೆಗೊಂದು ಎಲ್ಲೇ ಎಲ್ಲಿದೆ ?

ಆಸೆ ಎಂಬ ಚಿಗುರೆ ಭ್ರಮಿಸಿ ಬಾಳು ಸಾಗದು,
ಗೋಳು ಬಾಳು ಎಂದು ಜೀವ ಬಿಡಲು ಆಗದು.
ಯಡರು-ತೊಡರು ದಾಟಿ ನಿನ್ನ ದೋಣಿ ಸಾಗಿಸು.
ಸೋಲು ಗೆಲವು ನಿನ್ನದಲ್ಲ ಪಂದ್ಯ ದಾಟಿಸು.
ಅದೇನೇ ಆಗಲಿ ಚಿತ್ತ ಅವನ ದಾಗಿಸು.

ಎಲ್ಲಾತನ ಮಹಿಮೆ.

ಕುಂಬಾರಗೆ ವರುಷ ದೊಣ್ಣೆಗೆ; ತಗಲದು ಬರೀ ನಿಮಿಷ.
ಅಗಸನ ಬಡೆತ ಕತ್ತೆಯ ಒದೆತ; ಈ ಜೀವನ ಕಸರತ್ತು.
ಕಳೆಯುತ ಕೊಳಕು ಈ ಜೀವದ ಥಳಕು, ಈ ಜೀವದ ಶಿಸ್ತು.
ಕಷ್ಟವೋ ಸುಖವೋ ದುಃಖವ ಮರೆಯುವ ನೆಮ್ಮದಿ ಈ ಬಾಳು.
ಕೊಡುತಾ ಪ್ರೀತಿ ನೆಮ್ಮದಿ ಬಾಳಿಗೆ,
ದಿನನಿತ್ತ್ಯದ ದುಡಿಮೆ.ಹರುಷದ ಎಲ್ಲಾತನ ಮಹಿಮೆ.  

ಆಗದೇ; ಈ ಜೀವದ ನನಸು.

ಕಲಿಸುವ ಸಾಲೆ ಅಕ್ಷರ ಮಾಲೆ ,
ಬಾಳಿಗೆ ಈ ಜೀವನ ಕರೆಯೋಲೆ.
ಆಸೆಯ ಚಿಗುರು,ಸುಂದರ ಕನಸು,
ಹರೆಯದ ವಯಸು ದುಡಿಯುವ ಹುರುಪು;
ಆಹಾ ಈ ಜೀವನ ಸೊಗಸು. ಆಗದೇ;
ಈ ಜೀವದ ನನಸು. 

ಆತಗೆ ದಿನ ನಿತ್ತ್ಯದ ಕೆಲಸ

ದೇವನ ಒಲುಮೆ ಆಸೆ ಚಿಲುಮೆ
ಕರ್ತಾರನ ಕುಲುಮೆ ಹೊಮ್ಮುತ ಈ ಜೀವನ ಗರಿಮೆ.
ಸೋನಾರನು ಅವ ನೆಕಾರನು ಅವ ಆಗಸದಾ ಅಗಸ,
ಮುಗಿಸುವ ದಿನ ನಿತ್ತ್ಯದ ಕೆಲಸ.
ಕಂಮರನು ಅವ ಚಮ್ಮಾರನು ಅವ;
ನೇಯುತ ನೂಲ ತೊಡಪು  ಮಾಡುತ,
ನಿಲಾಂಬರದ ಕೆಲಸ, ಆತಗೆ ದಿನ ನಿತ್ತ್ಯದ ಕೆಲಸ.
ಚಿನ್ನಕೆ ಮೆರಗು ಲೋಹಕೆ ಅಲಗು ಗಾರೆಯದೇ ಕೆಲಸ.
ಆದರೂ ದಿನ ನಿತ್ತ್ಯದ ಕೆಲಸ.
ದುಡಿಯುವನು ಅವ ದುಡಿಸುವನೂ ಅವ,
ದುಡಿಸುವ ಧರ್ಮ ದುಡಿಯುವ ಕರ್ಮ,
ದಿನನಿತ್ಯದ ಮರ್ಮ. ಆತಗೆ ದಿನ ನಿತ್ತ್ಯದ ಕೆಲಸ. 

    

ನನ್ನಣ್ಣ ಅಣ್ಣ ಬಂದಾಗನನ್ನ, ಖುಷಿ ಮೇರೆ ದಾಟಿ ಬಂತು.

ನನ್ನಣ್ಣ ಅಣ್ಣ ಬಂದಾಗನನ್ನ, ಖುಷಿ ಮೇರೆ ದಾಟಿ ಬಂತು.ಬಾರೋ ನನ್ನಣ್ಣ ತಂಬಿಟ್ಟು ಚಿಣ್ಣ ಬಯಲಾಯ್ತು ನನ್ನಬಣ್ಣ.
ನೆನಪಾಗಿ ನಿನ್ನ ಹಾರುತ್ತ ಹಕ್ಕಿ ಇಳಿದಿಲ್ಲಿ ಓಡಿ ಬಂದೆ.ಎಲ್ಲೆಲ್ಲಿ ಇಳಿದೆ ಎಲ್ಲೆಲ್ಲಿ ಉಳಿದೆ ಕರಿದ್ಹಂಗೆ ನಂಗೆ ನಂಗೆ.
ಮರೆತಂಗ್ಹೆ ನನ್ನ ಮರೆಲ್ಹೆಂಗೆ ತಂಗಿ. ಅದಕೆಂದೇ  ಇಲ್ಲೇ  ಬಂದೆ.ಏನೆಲ್ಲಾ ಕೊಡುವೆ ತವರೆಲ್ಲ ಕೇಳು ಅದನ್ನೆಲ್ಲಾ ಕೊಡುವೆ ತಂಗಿ.
ಹಿಂಗ್ಯಾಕ ಅಂತಿ, ಬರ್ಲ್ಯಾಕ ಚಿಂತಿ, ಇರಲೇಳು ನಾಕುತಂತಿ.
ಎಸೊಂದಾ ದಿನವು ಕಳೆ ದಂಘ ಹೋತು ಬಂತಲ್ಲ ಹೋಗೋ ದಿನವು.
ಹಂಗ್ಹಿಂದ ಬಂದೆ ಹಿಂಗ್ಹಂತ ಹೊಂಟೇ ಉಳಿಲಾಕ ಒಲ್ಲೆ ಎನುವೆ.
ಹೊತ್ತಾರ ಬರುವೆ,ಹತ್ತ್ಹೇರ ತರುವೆ;ಉಳಿಲಾಕ ಎಂದೇ ಬರುವೆ.
ಅಂದ್ಹಂಗ ಬಂದು ಏನೆಲ್ಲಾ ಕೊಟ್ಟು ಪಟ್ಟಾಗಿ ಹೊರಟನಲ್ಲ.
ಖುಷಿಯಲ್ಲಿ ಬಾರೋ ಕೈಎತ್ತಿ ಸಾರಿ ಪೆಚ್ಚಾಗಿ ಬಿಟ್ಟೆನಲ್ಲ.
ನನ್ನಣ್ಣ ಅಣ್ಣ ಹೋದಾಗ ನನ್ನ,ಮನ ಬಿಕ್ಕಿ ಬಿಕ್ಕಿ ಅಂತು.
ಕರೆ ಆತನನ್ನ,ಎಂದಾಗ ನಿನ್ನ,ಮರೆಲ್ಯ್ಹ್ಹಾಂಗ ನೆನಪು ಅಂತು.
ಬಂದಾಗ ಬರಲಿ ಬರಲಾರದಿರ್ಲಿ,ಮರೆಲಾರ್ಧಂಗ ಬರ್ಲಿ. ಅದ ಕಿಂತ ಇಲ್ಲಿ ಇನ್ನೇನು ಮಿಗಿಲು ದಿಗಿಲಾಗಿ  ಏನು ಅಂತಿ?

Saturday 10 March 2012

ಹಳ್ಳಿ ಯಾಗ ಹೀಗಿತ್ತು ತಿಳವಳ್ಳಿ ಗ್ರಾಮ

ಅಷ್ತೈಶ್ವರ ರಿಂದ,ಸಪ್ತ-ಮಾತ್ರಿಕೆಯರಿಂದ,
ಅಭಯ ವಾಗಿತ್ತು ತಿಳವಳ್ಳಿ ಊರು.
ಕಲ್ಲುಮಠದ ಬತ್ತದ ಸಿಹಿನೀರಿನ ಭಾವಿ,
ಸುತ್ತಲು ನೀರಿನ ದೊಡ್ಡಕೆರೆ,
ಯಾತ್ರಿಕರಿಗೆ ನೀರಿಗಾಗಿ ದಾಸನ ಕಟ್ಟೆ.
ಉಳಿಯಲು ಕಟ್ಟಿದ ಧರ್ಮಸಾಲೆ.
ಮಡಿನೀರಿಗಾಗಿ ನರಸಿಂಹನ ಹೊಂಡ,
ಹರ ಭಕ್ತ ಶರಣರಿಗೆ ಶಾಂತಪ್ಪ,
ಹರಿ ಭಕ್ತರಿಗೆ ನರಸಿಂಹ ದೇವರು,
ರಾಮಭಕ್ತರಿಗೆ ಶ್ರೀರಾಮ, ಹನುಮಂತ,
ಗ್ರಾಮ ರಕ್ಷೆಗೆ ದ್ಯಾಮವ್ವ ದುರ್ಗವ್ವ ಕಾಳವ್ವ,
ನೆಮ್ಮದಿ ಇಂದಿತ್ತು ತಿಳವಳ್ಳಿ.

Thursday 8 March 2012

ಭಾವನೆ ಸಾಗುವ ಜೀವನದ ನೌಕೆ

ಭಾವನೆ ಯು ಭಾವದೊಳು ಉಲಿದಳಾ ಭಾವಗೀತೆ. ಭಾವನನೆ ನೆನೆಯುತ್ತ ಭಾವತುಂಬಿದ ಕವಿತೆ.
ಅಕ್ಕ ಭಾವನ ನೆನಪು ಹಚ್ಹ ಹಸಿರಾಗಿಸುತ, ಕಳೆದು ತವರಿನ ಹರುಷ ಮನ ಭಾರವಾಗಿಸುತ.
ಕಳೆದ ದಿನ ಗಳ ನೆನಪು ಮೆಲಕು ಹಾಕುತ್ತ, ಭಾವನೆ ಸಾಗುವ ಜೀವನದ ನೌಕೆ.