Sunday 22 March 2015

ಏಕ-ತಾರಿಯ ಭಾನ ಸ್ವರ-ರಾಗ-ಲಯ ದೊಳಗೆ; ಜ್ಯೋಗಿ ತಾ-ಹಾಡುತಿರೆ, ಕೇಳುಗರೇ ಧನ್ಯ!

ಏಕ-ತಾರಿಯ ಭಾನ ಸ್ವರ-ರಾಗ-ಲಯ ದೊಳಗೆ; ಜ್ಯೋಗಿ ತಾ-ಹಾಡುತಿರೆ, ಕೇಳುಗರೇ ಧನ್ಯ!
ಬಲಗೈನ ತಮ್ಬೂರಿ, ತಂತಿ-ಯದನಾ-ಮೀಟಿ; ಎಡಗೈ ಬೆರಳೊಳ-ಕಾವಳಿಗಿ ತಾಳ-ವ ಕುಟ್ಟಿ;
ಧ್ಯಾನ-ಮುದ್ರೆಯ ನಾಮ ಕಣ್ಣು ತಾ ಸ್ಮರಿಸುತಿರೆ; ಅಂಥ-ಕರುಳಿನ ರಾಗ ಭಾವ-ಧಾರೆಯ ತುಂಬಿ.
ಏಕ-ತಾರಿಯ ಭಾನ, ಸ್ವರ-ರಾಗ-ಲಯ ದೊಳಗೆ; ಜ್ಯೋಗಿ ತಾ-ಹಾಡುತಿರೆ, ಕೇಳುಗರೇ ಧನ್ಯ! ||1||
ಗಂಟ-ಲುಲಿಯಲು ಸ್ವರವು, ಅಲಾಪಿಸುತಿರಲು; ನಾದ-ಲೋಲನ ಮುರಲಿ, ಕಂಠ ಊದಿರಲು.
ಉದಯ-ರಾಗವು ಮಂದ, ಸ್ಥಾಯಿ ಪಂಚಮ-ಸ್ಥಬ್ಧ; ಅರುಣೋದಯ ಲಯವು, ಸಂಜೆ ಸಂಧ್ಯಾ-ರಾಗ.
ಮಧು-ಮಧುರ ಅತಿಮಧುರ, ಕಾಫಿ-ಮಿಶ್ರ ಪ್ರಿಯರೇ; ಹಸಿವು-ನೀರಡಿಕೆ-ಮನ, ಎಲ್ಲವನ ಮರೆಸುವವು||2||
ಕನ್ನಡದ-ಕುಲಪುತ್ರ ಕನಕ-ಪುರುಂಧರ-ದಾಸ; ಕಾಗಿನೆಲೆ-ಕೇಶವ ವಿಜಯ-ವಿಠಲನೇ-ನೆನೆವ ಉಡುಪಿ-ಶ್ರೀ ಕೃಷ್ಣ.
ಉತ್ತರ-ಕನ್ನಡ(ಧಾರಾನಗರಿಯ)ಮಹಿಮೆ; ದಕ್ಷಿಣ-ಕನ್ನಡ(ಭಾರ್ಗವ-ರಾಮನ)ಗಮಕ ಎತ್ತರಕೆ ಪಟ-ಪಟ ಶ್ರೀ-ಕೃಷ್ಣ-ಧ್ವಜವ.
ತ್ಯಾಗರಾಜ-ಗುರುಮಧ್ವ (ಗುರು-ಶಿಷ್ಯ) ವಾದ-ಸಂವಾದದೊಳು; ಉಗ್ಗಡಿಸಿದವು ಹರಿಕಥೆ-ಕೀರ್ತನಗಳು.||3||
ಸರಳ-ಕನ್ನಡದಲ್ಲಿ ತ್ರಿಪದಿ-ಚೌಪದಿಗಳಲಿ; ಏಕತಾರಿಯ ಯೋಗಿ/ಭೋಗಿ ಕಾಣದ-ನಿತ್ಯ-ಜ್ಯೋಗಿ.
ಧರ್ಮ$ವರದೆ ತುಂಗಾ$ಭದ್ರೆ, ನೇತ್ರಾವತಿ$ಶರಾವತಿ; ಕಾಳಿ$ಪಾಂಡರೀ ಕಾವೇರಿ; ಮಲ-ಪ್ರಭೆ ಮರೆಯದೇ ಶಾಲ್ಮಲೆ$ಕೃಷ್ಣೆ.
ಸಾಲೆಲ್ಲ-ತುಂಬಿದವು, ಭಾವನಾ-ಮನದಲ್ಲಿ(ಸಾಗರ-ಸಂಗಮ ದಲ್ಲಿ); ಮಲೆ-ಗಡಿ-ಬೆಳವದಲ್ಲಿ ಧನ್ಯ-ಕನ್ನಡ-ನಾಡು.||4|
ಹರಿದಾಸರ-ಭಜನೆ ಲಾಲಿ-ಗೀಗಿ ಪದವು; ಲಾವಣಿ-ಸುರ-ಸಂಗಮ ಸರಳ ಹಾಡು. ಪುಕ್ಕಟೆ-ಹೇಳುವನು, ಅವ-ಜೋಗೀ-ಕೇಳು
ಮಧು-ಮಧುರ ಅತಿಮಧುರ, ಕಾಫಿ-ಮಿಶ್ರ ಪ್ರಿಯರೇ; ಹಸಿವು-ನೀರಡಿಕೆ-ಮನ, ಎಲ್ಲವನ ಮರೆಸುವವು.
ಏಕ-ತಾರಿಯ ಭಾನ, ಸ್ವರ-ರಾಗ-ಲಯ ದೊಳಗೆ; ಜ್ಯೋಗಿ ತಾ ಹಾಡುತಿರೆ, ಕೇಳುಗರೇ ಧನ್ಯ! ||5||
B.R. Bhate, Dharwad. Dt:22-03-2015

No comments:

Post a Comment