ಸುಡಬೇಕ ಜನ್ಮ ಸುಖ
ವಿಲ್ಲ ಎನಬೇಡ, ಬೆದರುಕಗು ಬೆದರಿಸುತ, ಬರತಾವ-ಹಕ್ಕಿಗಳು
ಬರತಾವ ಬೆದರಿಸತಾವ, ಬೆದರುಕಗು ಬೆದರಿಸುತ, ಹಕ್ಕಿಗಳು
ಹೊಲಕಾಳ, ಮುಕುರಿ ಮುಗಿಸ್ಯಾವು
ಜನುಮ ಸಹಿಸಲು ಬೇಕ,
ಇನ್ನೆಷ್ಟು ಕಾಡ್ಯಾವು, ಕಾಳ ಕರ್ಕೊಟಕನ, ಕಡಿತ ಮಿಕ್ಕ ಬಳಿಕ.
ತಂಪೆರೆವ ಮಳೆಗಾಲ,
ಕೆಸರು ಕಿಚ್ಚಲಿ ಜಾರಿ, ಧೊಪ್ಪನೆ ಬಿದ್ದು, ಕೈ- ಸೊಂಟ ಮುರಿದಾಗ,
ಜಿಟಿ-ಜಿಟಿ
ಸುರಿಮಳೆ, ಸಾಕಪ್ಪ ಸಾಕು, ಕೆರೆ ಕೊತ್ತಲು ತುಂಬಿ, ಹಸಿರು ಹೊಲ ಬೆಳೆದಾಗ,
ಕಡು-ಕಷ್ಟ ಗಳು
ಇರಲಿ, ಹಬ್ಬ-ಹುಣ್ಣಿಮೆ ಬರಲಿ, ಬರಗಾಲದಲಿ ಬರದೆ ಈ ಅಧಿಕ ಮಾಸ.
ಸುಡಬೇಕ ಜನ್ಮ ಸುಖ
ವಿಲ್ಲ ಎನಬೇಡ, ಕೆಳೆದಾವ ಕಷ್ಟ, ಸಂತಸ ದುಃಖ ಮರೆಸುತ್ತ,
ಜಗ ಶಿವನ ಸಂಸಾರ, ಸುಖ-ದುಃಖ
ಪರಿವಾರ, ಹಗಲಿರುಳು ಹೋದಂತೆ,ಕಾಣ ಹೊಸ ಬೆಳಕ.
B.R. Bhate,
Dharwad. Dt;26-04-2014
No comments:
Post a Comment