Sunday 12 December 2010

ಭಾವನೆಯ ಭಾವಗೀತೆ

ಹಾವ ಭಾವನೆಯಲ್ಲಿ ಭಾವಗೀತೆಯ ಹಾಡಿ, ಕೇಳುಗರ ಎದೆ ತುಂಬಿ; ಹೃದಯ ಜಾಲಾಡಿ.
ತಾಳ ಮದ್ದಳೆಯಲ್ಲಿ ಗಾನ ಮಧುರತೆ ಬೆರೆಸಿ; ನಟರಾಜ ನಾಟ್ತ್ಯಕೆ ಕಿರು ಪದವ ಹೊಮ್ಮಿಸಿ.
ವೇಣು ಲೋಲನ ಮುರಲಿ,ಶ್ರುತಿಗೆ ಶ್ರುತಿಯನು ತುಂಬಿ,ಮಧುವನರಸುತ ರಾಗ ಝೇಂಕಾರ ತುಂಬಿ,
ವೇಣು ವಾದಕೆ ಸಾಟಿ ತಂಬೂರಿಯದ ಮೀಟಿ; ಕನ್ನಡದಿ ಹಾಡಿದೊಡೆ ಕೇಳುಗರ ಸೀಟೀ.
ದಾಸ ದಾಸರ ದಾಸ ಇಂಪಾಗಿ ಹಾಡಿ ದೊಡೆ,ಮಾಮರದ ಕೋಗಿಲೆ ಕುಹೂ ಕುಹೂ ಕೂಗೆ,
ಗಿಣಿರಾಮ ಕುಣಿದ ಹೆಜ್ಜೆ ಉಗುರಲ್ಲಿ;ಕೇಳುಗರು ಕೇಳುತಲೇ ಮೈಮರೆತರಲ್ಲಿ.
ಗಾನ ಗಂಧದ ಸುರಳಿ ಬಿರಿದು ಮನ ವರಳುತಲಿ.          

No comments:

Post a Comment